SUDDILIVE || SHIVAMOGGA
ಎಂಎಲ್ ಸಿ ಹರಿಬಿಟ್ಟ ಈ ಫೋಟೊ ಭರವಸೆ ಮೂಡಿಸುತ್ತಾ? Does this photo leaked by MLC inspire hope?
ನವಲೆ ಕೆರೆಯ ಮುಚ್ಚಿಹೋಗುವ ಆತಂಕದಲ್ಲಿ ಇರುವ ಬೆನ್ನಲ್ಲೇ ಎಂಎಲ್ಸಿ ಡಿಎಸ್ ಅರುಣ್ ಹರಿಬಿಟ್ಟಿರುವ ಈ ಫೋಟೋ ಒಂದು ಪರಿಸರ ಪ್ರೇಮಿಗಳ ಹಾಗೂ ಶಿವಮೊಗ್ಗದ ಜನತೆಗೆ ಆಶಾಭಾವನೆ ಮೂಡಿದರೂ ಕೊಂಚ ಅನುಮಾನವನ್ನೂ ಹುಟ್ಟಿಹಾಕಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದ ಬಳಿ ಇರುವ ನವುಲೆ ಕೆರೆಯನ್ನು ಧರ್ಮಸ್ಥಳ ಸಂಸ್ಥೆಯ ಸಹಯೋಗದೊಂದಿಗೆ ಪುನಶ್ಚೇತನ ಮಾಡಲು ನಿಶ್ಚಯಿಸಿದ್ದು, ಇಂದು ಧರ್ಮಸ್ಥಳ ಸಂಸ್ಥೆಯ ಅಧಿಕಾರಿಗಳಾದ ಗಣಪತಿ ಅವರಿಗೆ ವಿಧಾನಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ ಎಸ್ ಅರುಣ್ ಅವರು ಕೆರೆ ವೀಕ್ಷಣೆ ಮಾಡಿದರು ಎಂಬ ಪೋಸ್ಟ್ ಹರಿಬಿಟ್ಟಿದ್ದಾರೆ.
ಮಳೆಗಾಲದಲ್ಲಿ ಈ ಪ್ರಕ್ರಿಯೆ ನಡೆದಿರುವುದು ಆಶಾಭಾವನೆ ಮೂಡಿಸಿದರು ಅನುಮಾನಗಳ ಹುತ್ತ ಹರಡಿಕೊಂಡಿವೆ. ಕಾರಣ ಮಳೆಗಾಲದಲ್ಲಿ ಮಳೆಯಿಂದಾಗಿ ಕ್ರೀಡಾಂಗಣದ ಮೈದಾನವೆಲ್ಲ ನೀರಿನಲ್ಲಿ ಮುಳುಗುವ ಆತಂಕ ಹೆಚ್ಚಿದೆ. ಈ ಬೆನ್ನಲ್ಲೇ ಡಿಎಸ್ ಅರುಣ್ ಅವರ ಈ ಫೋಟೋ ಆಶಾಭಾವನೆ ಮೂಡಿಸಿದರು ಸಹ ಕೊಂಚ ಅನುಮಾನವನ್ನು ಹುಟ್ಟಿಸಿದೆ.
ನವುಲೆಕೆರೆ ಅಭಿವೃದ್ಧಿ ಏನೇನು ಆಗಲಿದೆ ಎಂಬುದರ ಬಗ್ಗೆ ವಿಧಾನಪರಿಷತ್ ನ ಸದಸ್ಯ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಕೆರೆಯ ಪುನಶ್ಚೇತನದ ಬಗ್ಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಕರೆ ಮಾಡಿದರೂ ಕರೆ ಎತ್ತದ ಕಾರಣ ಹೆಚ್ಚಿನ ಮಾಹಿತಿ ದೊರೆತಿಲ್ಲ. ಆದರೆ ಇವರ ಪೊಸ್ಟ್ ಗೆ ಹಲವು ಪರಿಸರವಾದಿಗಳಾದ ಜೋಸೆಫ್ ಹೂವರ್ ಸೇರಿ ಸ್ಥಳೀಯ ಪರಿಸರ ವಾದಿಗಳು ಅರುಣ್ ಪೋಸ್ಟ್ ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
photo leaked by MLC inspire hope