SUDDILIVE || SHIVAMOGGA
ಸಾಮಾಜಿಕ ಜಾಲತಣದಲ್ಲಿ ಬಲಿದಾನ ವಿಡಿಯೋ ಹರಿಬಿಟ್ಟರೆ ಕ್ರಮ-ಎಸ್ಪಿ ಮಿಥುನ್ ಕುಮಾರ್ ಜಿ.ಕೆ-Action will be taken if the video of the sacrifice is circulated on social media - SP Mithun Kumar G.K.
ಬಕ್ರೀದ್ ಹಬ್ಬದ ಪ್ರಯುಕ್ತ ಡಿಎಆರ್ ಸಭಾಂಗಣದಲ್ಲಿ ಶಾಂತಿ ಸಭೆ ನಡೆದಿದೆ. ಸಭೆಯಲ್ಲಿ ಮುಸ್ಲೀಂ ಮತ್ತು ಹಿಂದೂ ಸಂಘಟನೆಯ ಮುಖಂಡರು ಭಾಗಿಯಾಗಿ ಹಬ್ಬದ ಆಚರಣೆಯ ಬಗ್ಗೆ ಅಭಿಪ್ರಾಯವನ್ನ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ನಮಗೆ ಶಿವಮೊಗ್ಗದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರೋದು ಪುಣ್ಯ ಎಂದು ಹೇಳುವ ಮೂಲಕ ಸಭೀಕರ ಮನ ಗೆದ್ದಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ ಮುಸ್ಲೀಂ ಮುಖಂಡರಾದ ಪರ್ವೇಜ್ ವಿಜೃಂಭಣೆ ಹಬ್ಬಕ್ಕೆ ಅನುವು ಮಾಡಿಕೊಡುತ್ತೇವೆ ಎಂದಿರುವುದನ್ನ ಮತ್ತು ಹಿಂದೂ ಸಂಘಟನೆಯ ಮುಖಂಡ ರಮೇಶ್ ಬಾಬು ಅವರು ಕೋ ಆಪ್ ರೇಷನ್ ನೀಡಿರುವುದಾಗಿ ಹೇಳಿರುವುದು ಸಂತೋಷ ತಂದಿದೆ ಎಂದರು.
ಸಣ್ಣಪುಟ್ಟ ತೊಂದರೆ ಉಂಟಾಗುವುದು ಸಾಮಾನ್ಯ, ಆದರೆ ಹೆಚ್ಚಿನ ತೊಂದರೆ ಉಂಟಾದರೆ ನಾವು ಸರಿಪಡಿಸುತ್ತೇವೆ. ಸಮಾಜ ಘಾತುಕ ಶಕ್ತಿ ತಡೆಯಲು ಸೂಕ್ತ ಬಂದೋಬಸ್ತ್ಗೆ ಪೊಲೀಸ್ ಇಲಾಖೆ ಶಕ್ತವಾಗಿದ್ದು ಹೆಚ್ಚಿನ ಫೋರ್ಸ್ ಗಳನ್ನ ನಿಯೋಜಿಸಲಾಗುವುದು ಎಂದರು.
ಈಗಾಗಲೇ ಮೊಹಲ್ಲಾ ಮೀಟಿಂಗ್ ಮಾಡಲಾಗಿದೆ. ತ್ಯಾಗ ಮತ್ತು ಬಲಿದಾನದ ಸಂಕೇತ ಬಕ್ರೀದ್ ಆಗಿದೆ, ಬಲಿದಾನ ಸಮಯದಲ್ಲಿ ವಿಡಿಯೋ ಫೊಟೊ ವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ಕ್ರಮ ಜರಿಗಿಸಲಾಗುವುದು. ಇದು ಯಾವಾಗಲೂ ವೈಯುಕ್ತಿಕವಾಗಿ ಆಚರಿಸಲಾಗುತ್ತದೆ. ಹಾಗೆ ಹಬ್ಬ ಆಚರಿಸಿ ಎಂದಿರುವ ಎಸ್ಪಿ ಅವರು, ಬೇರೆ ಜಿಲ್ಲೆಯಲ್ಲಿ ಬಲಿದಾನದ ಫೊಟೊ ವಿಡಿಯೋ ಬಂದರೆ ನಮ್ಮ ಗಮನಕ್ಕೆ ತರುವಂತೆ ಮುಖಂಡರು ಆಗ್ರಹಿಸಿದರು.
ಪಾಲಿಕೆಯ ಇಂಜಿನಿಯರ್ ನೇತೃತ್ವದಲ್ಲಿ ಹಬ್ಬಕ್ಕೆ ಹಲವು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಬ್ಬದ ಮುಂಚಿತವಾಗಿ ಕ್ಲೀನಿಂಗ್ ಹೆಚ್ಚು ಮಾಡಲಾಗುವುದು. ಮೆಸ್ಕಾಂ ನವರಿಂದ ಪವರ್ ಕಟ್ ಆಗದಂತೆ ನೋಡಿಕೊಳ್ಳಲಾಗುವುದು. ಡಿಸಿಯವರು ಸಹ ಮಾತನಾಡಿ ಸಮಸ್ಯೆಯಾಗದಂತೆ ಸೂಕ್ತ ರೀತಿಯಲ್ಲಿ ಕ್ರಮಜರುಗಿಸಲಾಗುವುದಾಗಿ ಭರವಸೆ ನೀಡಿದರು. ಯಾವುದೇ ಸಮಸ್ಯೆಗೆ ನಮ್ಮ ಸರ್ಕಾರಿ ಇಲಾಖೆಗಳು ನಿಮ್ಮ ಜೊತೆಯಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು.
sacrifice is circulated on social media - SP Mithun Kumar G.K.