SUDDILIVE || THIRTHAHALLI
ಅಭಿವೃದ್ಧಿಯ ಹೆರಸರಿನಲ್ಲಿ ಧರೆಗುರುಳಿದ ಧೂಪದ ಮರ-ಪರಿಸರ ವಾದಿಗಳ ಮೌನ-The tree that fell in the name of development - the silence of environmentalists
ಕೋಣಂದೂರಿನಲ್ಲಿ ಮೂರು ಮರಗಳು ರಾಜಾರೋಶವಾಗಿ ನೆಲಸಮವಾಗುತ್ತಿದೆ. ಆರಂಭದಲ್ಲಿ ಪರಿಸರವಾದಿಗಳ ಹೋರಾಟ ಈಗ ಮೌನಕ್ಕೆ ಜಾರಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಪರಿಸರ ಹೋರಾಟಗಾರರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿ ಕಡಿಯದೆ ಉಳಿಸಿಕೊಂಡಿದ್ದ ಮೂರು ಮರಗಳು ಕೊಣಂದೂರಿನಲ್ಲಿ ಇಂದು ರಾಜಾರೋಶವಾಗಿ ಬುಡಮೇಲಾಗುತ್ತಿವೆ. ತೀರ್ಥಹಳ್ಳಿ ಕೋಣಂದೂರು ರಾಜ್ಯ ಹೆದ್ದಾರಿ ಪಟ್ಟಣ ಹಾದು ಹೋಗುವಾಗ ಇಕ್ಕೆಲಗಳಲ್ಲಿ ಸಾಕಷ್ಟು ಮರಗಳನ್ನು ಕಡಿದು ಡಿವೈಡರ್ ರಸ್ತೆ ಮಾಡಲಾಗಿದೆ.
ಕೋಣಂದೂರನ್ನ ಗ್ರಾಮ ಪಂಚಾಯಿತಿಯನ್ನ ಪುರಸಭೆ ಮೇಲ್ದರ್ಜೆಗೆ ಏರಿಸಲು ಯೋಚಿಸಲಾಗುತ್ತಿದೆ. ಈ ಯೋಚನೆಯ ಅಡಿಯಲ್ಲಿ ಕೋಣಂದೂರಿನ ರಸ್ತೆಗಳ ಅಗಲೀಕರಣವೂ ಆಗುತ್ತಿದೆ. ರಸ್ತೆ ಅಗಲೀಕರಣದ ಕಾರಣಕ್ಕೆ ಮೂರು ಮರಗಳಿಗೆ ಕೊಡಲಿಪೆಟ್ಟು ಬಿದ್ದಿವೆ.
ಯಾವ ಕಾರಣಕ್ಕೋ ಯಾರ ಆಕ್ಷೇಪಣೆಗೋ ಹಾಗೇ ಇರಿಸಲಾಗಿದ್ದ ಮೂರು ಧೂಪದ ಮರ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮೂಲಕ ಮರಗಳ ಮೇಲೆ ಹಕ್ಕಿಗಳು ಹಾರುವಂತೆ ವಿಡಿಯೋ ವೈರಲ್ ಆಗಿದ್ದವು.
ಜನರು ಭಾವನಾತ್ಮಕವಾಗಿಯೂ ಮರಗಳಿಗೆ ಕನೆಕ್ಟ್ ಆಗಿದ್ದರು. ಮರು ದಿನ CCF , DCF ಗಳು ಸ್ಥಳಕ್ಕೆ ಓಡಿಹೋಗಿದ್ದರು. ಸ್ಥಳ ಪರಿಶೀಲನೆ ನೆಪದಲ್ಲಿ ಸುದ್ದಿಯೂ ಆಯ್ತು. ಎಲ್ಲೆಡೆ ಪರಿಸರವಾದಿಗಳೂ ನಾನಾ ಕಡೆಯಿಂದ ಈ ಸುದ್ದಿ ಅವಘಡದಂತೆ ಬಿಂಬಿಸಿದರು. ದುರಂತ ಎಂದರೆ ಈ ಮರಗಳು ಯಾವುದೇ ಆಕ್ಷೇಪಣೆಗಳಿಗೆ ಉಳಿಯಲೇ ಇಲ್ಲ. ಇಂದು ಕಡಿದು ಬಿಸಾಡುತ್ತಿರುವುದಕ್ಕೆ ಸುದ್ದಿಲೈವ್ ಸಾಕ್ಷಿಯಾಗಿದೆ.
ಟಿಪ್ಪು ಕಾಲದಲ್ಲಿ ಹುಂಚದ ಜೈನ ಮಠಕ್ಕೆ ಬರುವ ಜೈನ ಮುನಿಗಳಿಗೆ ಆಶ್ರಯ ನೀಡುವ ಮರ ಎಂಬ ಇತಿಹಾಸವೂ ಇತ್ತು. ಈ ಇತಿಹಾಸದ ಮರ ಅಭಿವೃದ್ಧಿಯ ಹಿನ್ನಲೆಯಲ್ಲಿ ಧರಗೆ ಉರಳುತ್ತಿವೆ. ಇಂತಹ ಮರಗಳನ್ನೇ ಉಳಿಕೊಳ್ಳಲಾಗದ ನಾವು ಅಭಿವೃದ್ಧಿಗಾಗಿ ಎಲ್ಲವನ್ನ ಕಳೆದುಕೊಳ್ಳ ಮಟ್ಟಕ್ಕೆ ತಲುಪಿದ್ದೇವೆ?
the silence of environmentalists