SUDDILIVE || SHIAMOGGA
ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರ ಸಾವು-Two youths die after falling into agricultural pit
![]() |
ಕೃಷಿ ಹೊಂಡಕ್ಕೆ ಬಿದ್ದು, ಇಬ್ಬರು ಯುವಕರ ಸಾವು ಕಂಡಿರುವ ಘಟನೆ ಶಿವಮೊಗ್ಗದ ಯಡವಾಲ ಗ್ರಾಮದಲ್ಲಿ ತಡರಾತ್ರಿ ನಡೆದ ಘಟನೆ.
ಗೌತಮ್ ನಾಯ್ಕ್ (22) ಹಾಗೂ ಚಿರಂಜೀವಿ(22)ಮೃತ ಯುವಕರಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಯಡವಾಲದಲ್ಲಿ ಈ ಘಟನೆ ಸಂಭವಿಸಿದೆ.
ಯಡವಾಲ ಗ್ರಾಮದ ನಿವಾಸಿ ಗೌತಮ್ ನಾಯ್ಕ್ ಆಗಿದ್ದರೆ, ಶಿವಮೊಗ್ಗ ನಗರದ ಕುಂಬಾರಗುಂಡಿ ನಿವಾಸಿ ಚಿರಂಜೀವಿ ಆಗಿದ್ದಾನೆ. ಯಡವಾಲ ಗ್ರಾಮದ ಸ್ನೇಹಿತನ ಮನೆಗೆ ಶಿವಮೊಗ್ಗದಿಂದ ತೆರಳಿದ್ದ 10 ಯುವಕರು ಕೃಷಿ ಹೊಂಡಕ್ಕೆ ಇಳಿದಿದ್ದರು. ಅದರಲ್ಲಿ ಇಬ್ಬರು ಬಜಾವ್ ಆಗದೆ ಕೃಷಿ ಹೊಂಡದಲ್ಲಿ ಸಾವನ್ನಪ್ಪಿದ್ದಾರೆ.
ಇತ್ತೀಚಿಗಷ್ಟೇ ಡಿಲವರಿಯಾಗಿದ್ದ ಸ್ನೇಹಿತನ ತಂಗಿಯ ಮಗು ನೋಡಲು ಹೋಗಿದ್ದ ಸ್ನೇಹಿತರು, ಮನೆಗೆ ಭೇಟಿ ನೀಡಿ, ಬಳಿಕ ತೋಟದಲ್ಲಿ ಪಾರ್ಟಿಗೆ ಹೋಗಿದ್ದರು. ಪಾರ್ಟಿ ಮಧ್ಯದಲ್ಲೇ ಕೃಷಿ ಹೊಂಡದ ಬಳಿ ತೆರಳಿ, ಓರ್ವ ಯುವಕ ಕಾಲು ಜಾರಿ ಬಿದ್ದಿದ್ದ.
ಆತನ ರಕ್ಷಣೆಗೆ ಧಾವಿಸಿದ್ದ ಇನ್ನೊಬ್ಬ ಯುವಕ ಸಹ ನೀರು ಪಾಲಾಗಿದ್ದಾನೆ. ಯುವಕರ ಮೃತದೇಹಗಳ ಮೆಗ್ಗಾನ್ ಶವಾಗಾರಕ್ಕೆ ಶಿಫ್ಟ್ ಆಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Two youths die after falling into agricultural pit