SUDDILIVE || SHIVAMOGGA
ಎರಡನೇ ಶತಮಾನದ ದೇವಸ್ಥಾನದ ವಿಗ್ರಹಕ್ಕೆ ಹಾನಿ-Damage to a Second-Century Temple Idol
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕೂಬಟೂರು ಗ್ರಾಮದಲ್ಲಿರುವ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿ ದೇವಸ್ಥಾನದ ವಿಗ್ರಹವನ್ನ ಹಾಳು ಮಾಡಲಾಗಿದೆ.
ನಿನ್ನೆ ಮದ್ಯಾಹ್ನ ಸುಮಾರು ನಾಲ್ಕು ಗಂಟೆ ವೇಳೆಯಲ್ಲಿ ದೇವಸ್ಥಾನದ ಬೀಗ ಒಡೆದು ಬಾಗಿಲು ತೆರೆದು ನರಸಿಂಹ ಸ್ವಾಮಿ ವಿಗ್ರಹವನ್ನು ಹಾಳು ಮಾಡಲು ಪ್ರಯತ್ನಿಸಿ ವಿಗ್ರಹದ ಬಾಯಿಯನ್ನು ಹಾಳು ಮಾಡಲಾಗಿದೆ. ಯುವುದೋ ಬಲವಾದ ವಸ್ತುಗಳಿಂದ ವಿಗ್ರಹ ಹಾನಿಮಾಡಲಾಗಿದೆ.
2 ನೇ ಶತಮಾನದಲ್ಲಿ ಈ ದೇವಸ್ಥಾನವನ್ನ ನಿರ್ಮಿಸಲಾಗಿದ್ದು, ಇದುವರೆಗೂ ಯಾವುದೇ ಹಾನಿಗೊಳಗಾಗಿರಲಿಲ್ಲ. ಇತಿಹಾಸದ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಶ್ವಾನ ಪಡೆ ಮತ್ತು ಇತರೆ ತನಿಖಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ.
Damage to a Second-Century Temple Idol