ಜಿಲ್ಲಾ ಪೊಲೀಸರ ವಿರುದ್ಧ ತಿರುಗಿಬಿದ್ದ ಶಾಸಕರು! MLAs turn against district police

SUDDILIVE || SHIVAMOGGA

ಜಿಲ್ಲಾ ಪೊಲೀಸರ ವಿರುದ್ಧ ತಿರುಗಿಬಿದ್ದ ಶಾಸಕರು! MLAs turn against district police    




ಶಿವಮೊಗ್ಗದ ಮಾರ್ನಮಿ ಬೈಲು ಆರ್ ಎಂ ಎಲ್ ನಗರದಲ್ಲಿ ಹಿಂದೂ ಯುವಕನ ಮೇಲೆ ಧರ್ಮ ಕೇಳಿ ಹಲ್ಲೆ ನಡೆಸಿದ ವಿಷಯದಲ್ಲಿ ಶಾಸಕ ಚೆನ್ನಬಸಪ್ಪ ಜಿಲ್ಲಾ ಪೊಲೀಸರ ವಿರುದ್ಧವೇ ಸಮರ ಸಾರಿದಂತೆ ಕಾಣುತ್ತಿದೆ. 

ಶಿವಮೊಗ್ಗ ಮಹಾನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಗಂಭೀರವಾಗಿ ಹಾಳಾಗಿರುವ ಹಿನ್ನೆಲೆಯಲ್ಲಿ, ಇಂದು ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಬೆಂಗಳೂರಿನಲ್ಲಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು (DG ಮತ್ತು IGP) ಡಾ. ಎಂ.ಎ. ಸಲೀಮ್ ಹಾಗೂ ಅಪರ ಪೊಲೀಸ್ ಮಹಾ ನಿರ್ದೇಶಕರಾದ (ADGP) ಶ್ರೀ ಹಿತೇಂದ್ರ ಕುಮಾರ್ ಅವರನ್ನು ಭೇಟಿಯಾಗಿ, ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಕರ್ತವ್ಯ ನಿರ್ವಹಣೆಯ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. 

ಕಳೆದ ಎರಡು ವರ್ಷಗಳಿಂದ ನಗರದಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆಗಳು, ಮಾದಕ ವಸ್ತುಗಳ ಮಿತಿಮೀರಿದ ಬಳಿಕೆ ಮತ್ತು ಅಪರಾಧ ಕೃತ್ಯಗಳ ವಿಪರೀತ ಹೆಚ್ಚಳಕ್ಕೆ ಸಂಬಂಧಿಸಿದಂತೆ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು (DG ಮತ್ತು IGP) ಡಾ. ಎಂ.ಎ. ಸಲೀಮ್ ಹಾಗೂ ಅಪರ ಪೊಲೀಸ್ ಮಹಾ ನಿರ್ದೇಶಕರಾದ (ADGP) ಶ್ರೀ ಹಿತೇಂದ್ರ ಕುಮಾರ್ಅವರೊಂದಿಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ. ಇತ್ತೀಚೆಗೆ ನಗರದ ನಿವಾಸಿಯಾದ ಶ್ರೀ ಹರೀಶ್ ಎಂಬುವರ ಮೇಲೆ ಮುಸಲ್ಮಾನ ಗುಂಡಗಳಿಂದ ನಡೆದ ಹಲ್ಲೆ ಪ್ರಕರಣದ ಕುರಿತು ವಿವರಿಸಿದ್ದಾರೆ. 

ನಮ್ಮ ಮನವಿಗೆ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು (DG ಮತ್ತು IGP) ಡಾ. ಎಂ.ಎ. ಸಲೀಮ್ ಹಾಗೂ ಅಪರ ಪೊಲೀಸ್ ಮಹಾ ನಿರ್ದೇಶಕರಾದ (ADGP) ಶ್ರೀ ಹಿತೇಂದ್ರ ಕುಮಾರ್ ತಕ್ಷಣವೇ ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶಿವಮೊಗ್ಗದ ಕಾನೂನು ಸುವ್ಯವಸ್ಥೆಯ ಗಂಭೀರತೆಯನ್ನು ಮನಗಂಡು, ಶಿವಮೊಗ್ಗದ ಸುರಕ್ಷತೆ ಮತ್ತು ಸಾರ್ವಜನಿಕ ಶಾಂತಿಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿ, ತಕ್ಷಣದ ಕ್ರಮಕ್ಕೆ ಸೂಚಿಸಿದರು.

ಈ ಹಿನ್ನೆಲೆಯಲ್ಲಿ, ಜಿಲ್ಲೆಯ ಕಾನೂನು ಸುವ್ಯವಸ್ಥೆಯ ವಾಸ್ತವ ಪರಿಸ್ಥಿತಿ ಮತ್ತು ಪೊಲೀಸ್ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಸಮಗ್ರವಾಗಿ ಪರಿಶೀಲಿಸಿ, ಅವಶ್ಯಕ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ, ಪೂರ್ವ ವಲಯ, ದಾವಣಗೆರೆ ಐ.ಜಿ.ಪಿ (IGP) ಶ್ರೀ ರವಿ ಕಾಂತೇಗೌಡ ಐ.ಪಿ.ಎಸ್. ಅವರು ನಾಳೆ (ಗುರುವಾರ, ನವೆಂಬರ್ 20, 2025) ಶಿವಮೊಗ್ಗ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು. ಈ ಭೇಟಿಯ ಮೂಲಕ ಪೊಲೀಸ್ ಇಲಾಖೆಯಲ್ಲಿ ನಿರ್ಲಕ್ಷ್ಯಕ್ಕೆ ಶೂನ್ಯ ಸಹಿಷ್ಣುತಾ ನೀತಿಯನ್ನು ಜಾರಿಗೊಳಿಸಿ, ಹೊಣೆಗಾರಿಕೆ ಮತ್ತು ಶಿಸ್ತನ್ನು ಮರುಸ್ಥಾಪಿಸುವ ಭರವಸೆ ಇದೆ ಎಂದು ಶಾಸಕರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಶಿವಮೊಗ್ಗದ ಅಭಿವೃದ್ಧಿ, ಸುರಕ್ಷತೆ, ಮತ್ತು ಗೌರವಕ್ಕಾಗಿ ಯಾವುದೇ ರಾಜಿ ಇಲ್ಲ. ಎಂತಹ ಸವಾಲು ಎದುರಾದರೂ, ಶಿವಮೊಗ್ಗ ನಗರಕ್ಕಾಗಿ ನಾವು ಸದಾ ಸಿದ್ಧ ಮತ್ತು ಬದ್ಧ ಎಂದು ಬರೆದುಕೊಂಡಿರುವುದು ಅಚ್ಚರಿ ಮೂಡಿಸಿದೆ. 

ಹಲ್ಲೆ ನಡೆಸಿದ್ದು ಒಬ್ಬ ಮುಸ್ಲೀಂ ಮತ್ತಿಬ್ಬರು ಹಿಂದೂಗಳಾ?

ಅದರೆ ಪೊಲೀಸ್ ಇಲಾಖೆ ಹರೀಶ್ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ನಿನ್ನೆ ಅಡ್ಡು ಎಂಬಾತನನ್ನ ಬಂಧಿಸಿರುವ ಪೊಲೀಸರು. ಇನ್ನು ಘಟನೆಯಲ್ಲಿ ಆರೋಪಿಯಾಗಿರುವ ಚರಣ್ ಮತ್ತು ನಿರಂಜನ್ ಯಾನೆ ಬೆಕ್ಕು ಎಂಬಾತನನ್ನ ಬಂಧಿಸಿದ್ದಾರೆ. ಇದರಲ್ಲಿ ಧರ್ಮ ಕೇಳಿ ಹಲ್ಲೆ ನಡೆಸಿದ ಘಟನೆ ಸತ್ಯಕ್ಕೆ ದೂರವಾಗಿದೆ. ಕಾರಣ ಇಬ್ಬರು ಹಿಂದೂಗಳು ಮತ್ತು ಒಬ್ಬ ಮುಸ್ಲೀಂ ಆಗಿದ್ದಾರೆ ಎಂಬ ಮಾಹಿತಿ ಇಲಾಖೆಯ ವತಿಯಿಂದ ಕೇಳಿ ಬಂದಿದೆ. 

MLAs turn against district police 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close