SUDDILIVE || SHIVAMOGGA
ಕಸಾಯಿ ಖಾನೆ ಮತ್ತು ಅಕ್ರಮಮದ್ಯ ಮಾರಾಟದ ಮೇಲೆ ಪೊಲೀಸ್ ದಾಳಿ-Police raid on butcher shop and sale of illegal liquor
ಅಕ್ರಮ ಗೋಮಾಂಸ ಮಾರಾಟದ ಕೇಂದ್ರದ ಮೇಲೆ ಹಾಗೂ ಅಕ್ರಮ ಮದ್ಯ ಮಾರಾಟದ ಮೇಲೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.
ದೊಡ್ಡಪೇಟೆ ಠಾಣೆಯ ಸಬ್ ಇನ್ಸ್ಪೆಕ್ಟರ್ರಾದ ನಾರಾಯಣ ಮಧುಗಿರಿ ಮತ್ತು ತಂಡದವರಿಂದ ನ.7 ರಂದು ಅಕ್ರಮ ಚಟುವಟಿಕೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಬುದ್ಧ ನಗರ ಎರಡನೇ ಕ್ರಾಸಿನಲ್ಲಿ ಅಕ್ರಮ ಗೋಮಾಂಸದ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.
ಟಿಪ್ಪು ತಂದೆ ಅಬ್ದುಲ್ ಗಫರ್ 57 ವರ್ಷ ಬುದ್ಧ ನಗರ ಎರಡನೇ ಕ್ರಾಸ್ ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದು ಇವರ ಮೇಲೆ ದಾಳಿ ಮಾಡಿ ಕೇಸ್ ದಾಖಲಾಗಿದೆ. ಹಾಗೆ ದೊಡ್ಡಪೇಟೆ ಠಾಣೆಯ ಖಾಸಗಿ ಬಸ್ ಸ್ಟಾಂಡ್ ನಿಂದಗಡೆ ಇಂದ್ರ ಕ್ಯಾಂಟೀನ್ ಪಕ್ಕದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುವ ವಿಶ್ವನಾಥ್ ತಂದೆ ತಮ್ಮಣ್ಣ ಗಾಡಿಕೊಪ್ಪ ಇವರ ಮೇಲೆ ದಾಳಿ ನಡೆಸಿ ಅಕ್ರಮ ಮಧ್ಯ ಮಾರಾಟ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
Police raid on butcher shop and sale of illegal liquor
