SUDDILIVE || SHIVAMOGGA
ದೆಹಲಿ ಕಾರು ಬ್ಲಾಸ್ಟ್ ಘಟನೆ ಖಂಡಿಸಿ ಹಿಂಜಾವೇ ಹಲವೆಡೆ ಪ್ರತಿಭಟನೆ-Protests in many places in Hinjewadi condemning the Delhi car blast incident
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದಕರಿಂದ ನಡೆದ ಕಾರು ಬ್ಲಾಸ್ಟ್ ಘಟನೆಯನ್ನ ಖಂಡಿಸಿ ಇಂದು ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದೆ.
ಶಿವಮೊಗ್ಗದ ಶಿವಪ್ಪ ನಾಯಕ ಪ್ರತಿಮೆಯ ಬಳಿ ಭದ್ರಾವತಿ. ರಿಪ್ಪನ್ ಪೇಟೆ. ಶಿಕಾರಿಪುರದಲ್ಲಿ ಹಿಂ.ಜಾ.ವೇ. ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದೆ.
ಭದ್ರಾವತಿ ನಗರದಲ್ಲಿ ಪ್ರತಿಭಟನೆಯ ಕುರಿತು ಮಾತನಾಡಿದ ದೇವರಾಜ ಅರಳಿಹಳ್ಳಿ, ದೇಶದಲ್ಲಿ ಸುಮಾರು 700 ವರ್ಷಗಳ ಕಾಲ ಇಸ್ಲಾಮಿನ ಆಕ್ರಮಣವನ್ನು ಎದುರಿಸಲಾಗಿತ್ತು. ಪರಾಕ್ರಮಿ ಹಿಂದು ಮತ್ತೆ ಮತಾಂಧರ ದಾಳಿಯನ್ನ ಎದುರಿಸಲು ಸಮಾಜವನ್ನು ಮತ್ತೆ ಜಾಗೃತಿಗೊಳಿಸಬೇಕಾಗಿದೆ.
ಅನಕ್ಷರಸ್ಥರು ಮಾತ್ರ ಅಲ್ಲದೆ ವಿದ್ಯಾವಂತರು ಸಹ ದೇಶ ವಿರೋಧಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಭಯೋತ್ಪಾದಕರನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು. ಫೋಕಸ್ ಮಂಜಣ್ಣ. ಪವನ ಶ್ರೀಕಾಂತ ಕಿಶೋರ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.


