SUDDILIVE || SHIVAMOGGA
ಮೈಲಾರೇಶ್ವರ ದೇವಸ್ಥಾನದಲ್ಲಿ ಎರಡು ದಿನ ಭಂಡಾರ ಕಟ್ಟುವ ಮತ್ತು ಬೀಸುವ ಕಾರ್ಯಕ್ರಮ-Two-day Bhandara building and blowing program at Mailareshwara Temple
ಕುರುಬ ಸಮಾಜದ ಆರಾಧ್ಯ ದೈವ ಮೈಲಾರೇಶ್ವರ ಸನ್ನಿಧಿಯಲ್ಲಿ ಸುಬ್ರಹ್ಮಣ್ಯ ಸೃಷ್ಟಿಯ ಪ್ರಯುಕ್ತ ನವೆಂಬರ್ 26 ಮತ್ತು 27ರಂದು ಕಾರ್ತಿಕ ದೀಪೋತ್ಸವ ನಡೆಯಲಿದೆ.
ಬಿ.ಹೆಚ್ ರಸ್ತೆಯಲ್ಲಿರು ದೇವಾಲಯದಲ್ಲಿ ನ.26 ರಂದು ಬುಧವಾರ ಬೆಳಿಗ್ಗೆ 9:00 ಗಂಟೆಯಿಂದ ಭಂಡಾರ ಕುಟ್ಟುವುದು ಹಾಗೂ ಬೀಸುವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಮಡಿಯಿಂದ ಕಾರ್ಯಕ್ರಮಕ್ಕೆ ಭಾಗವಹಿಸಿ 27ರ ಗುರುವಾರ ಸಂಜೆ ಪೂಜಾ ಕಾರ್ಯಕ್ರಮ ಜರುಗಲಿದೆ. ನಂತರ ಭಂಡಾರ ಮತ್ತು ಪ್ರಸಾದ ವಿತರಣೆ ಮಾಡಲಾಗುತ್ತದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಶ್ರೀ ಮೈಲಾರೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಶ್ರೀ ಏಳು ಕೋಟಿ ಗೊರವರು ತಿಳಿಸಿದ್ದಾರೆ.
ತೀರ್ಥಹಳ್ಳಿಯ ಎಳ್ಳ ಅಮವಾಸೆ ಜಾತ್ರೆ
ಪುರಾಣ ಪ್ರಸಿದ್ಧಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಸಂಬಂಧಿಸಿದಂತೆ ಇಂದು ಸಂಜೆ 4-30ಕ್ಕೆ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ತಾಲೂಕು ದಂಡಾಧಿಕಾರಿ ರಂಜಿತ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಿಗದಿ ಮಾಡಲಾಗಿದೆ. ಈ ಬಾರಿ ಜಾತ್ರೆ ಹಾಗೂ ತೆಪ್ಪೋತ್ಸವ ಡಿ. 19 ರಿಂದ ಆರಂಭವಾಗಲಿದೆ.
Two-day Bhandara building and blowing program at Mailareshwara Temple
