SUDDILIVE || SHIVAMOGGA
ಸಾಲ ತಾಳಲಾರದೆ ರೈತ ಆತ್ಮಹತ್ಯೆ- Unable to bear debt, farmer commits suicide
ಸಾಲದ ಹೊರೆ ತಾಳಲಾರದೆ ಶಿಕಾರಿಪುರ ತಾಲೂಕು ಹಿರೇಕೊರಲಹಳ್ಳಿ ಗ್ರಾಮದ ವೃದ್ಧ ರೈತ ಪೀಕ್ಲಾ ನಾಯ್ಕ (70) ಅಂಜನಾಪುರ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ ಜಮೀನಿಗೆ ಹೋದಾಗ ಸಮೀಪದ ಅಂಜನಾಪುರ ಜಲಾಶಯ ಹಿನ್ನೀರಿಗೆ ಹಾರಿದ್ದಾರೆ ಎಂದು ಆರೋಪಿಸಲಾಗಿದೆ. ಹಾರೋಗೊಪ್ಪ ಗ್ರಾಮೀಣ ಬ್ಯಾಂಕ್, ಫೈನಾನ್ಸ್ನಲ್ಲಿ ಸಾಲ ಹಾಗೂ ಕೈಸಾಲವನ್ನು ಮಾಡಿಕೊಂಡಿದ್ದರು ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Unable to bear debt, farmer commits suicide
