SUDDILIVE || BANGALORE
KSCA ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ- Venkatesh Prasad elected as KSCA Chairman
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ KSCA ಚುನಾವಣೆಯಲ್ಲಿ ಮಾಜಿ ಕ್ರಿಕಟಿಗ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವೆಂಕಟೇಶ್ ಪ್ರಸಾದ್ ಗೆ 739 ಮತಗಳು ದೊರೆತರೆ ಎದುರಾಳಿಯಾಗಿದ್ದ ಶಾಂತಕುಮಾರ್ ಗೆ 558 ಮತಗಳು ದೊರೆತಿವೆ
ವೆಂಕಟೇಶ್ ಪ್ರಸಾದ್ ಮತ್ತು ಬ್ರಿಜೇಶ್ ಪಟೇಲ್ ಬಣಗಳ ನಡುವಿನ ತೀವ್ರ ಸೆಣಸಾಟದಲಲ್ಲಿ ವೆಂಕಟೇಶ್ ಪ್ರಸಾದ್ ಬಣ ಗೆಲುವು ಸಾಧಿಸಿದೆ. ಬ್ರಿಜೇಶ್ ಪಟೇಲ್ ಬಣದ ವತಿಯಿಂದ ಬಿ.ಕೆ ರವಿ ಸಹಕಾರ್ಯದರ್ಶಿಯಾಗಿ ಆಗಿದ್ದಾರೆ.
ಇದರ ನಡುವೆ ಇದೇ ಬ್ರಿಜೇಶ್ ಪಟೇಲ್ ಬಣದಿಂದ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ವಲಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಹಾಗೂ ಅರುಣ್ ಅವರು ನಾಗೇಂದ್ರ ಪಂಡಿತ್ ವಿರುದ್ದ ಭರ್ಜರಿ ಗೆಲವು ಸಾಧಿಸಿದ್ದಾರೆ.
ಅರುಣ್ ಗೆ 722 ಮತಗಳು ದೊರೆತರೆ, ಪಂಡಿತ್ ಗೆ 585 ಮತಗಳು ದೊರೆತಿವೆ. ಅರುಣ್ ಶಿವಮೊಗ್ಗ ವಲಯದ ಸಂಚಾಲಕರಾಗಿ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
Venkatesh Prasad elected as KSCA Chairman

