SUDDILIVE || SHIVAMOGGA
ಸಾಮಾಜಿಕ ಕಳಕಳಿಗೆ ಸಂದ ಜಯ - ಯುವ ಕಾಂಗ್ರೆಸ್ ನಿಂದ ಜಿಲ್ಲಾಡಳಿತಕ್ಕೆ ಅಭಿನಂದನೆಗಳು-Victory for social concern - Youth Congress congratulates the district administration
ಇತ್ತೀಚಿಗೆ ಶಿವಮೊಗ್ಗ ನಗರದ ಹೊರ ವಲಯ ಹಾಗೂ ಗ್ರಾಮಾಂತರ ಭಾಗದ ಗಡಿ ಭಾಗಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಗಳ ವಿಚಾರವಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ಸಲ್ಲಿಸಿದ ಆಗ್ರಹದ ಮನವಿಗೆ ತತ್ತಕ್ಷಣ ಸ್ಪಂದಿಸಿ, ಕಾನೂನು ಬಾಹಿರ ಚಟುವಟಿಕೆಯನ್ನ ಬಂದ್ ಮಡಿರುವುದನ್ನ ಸ್ವಾಗತಿಸಲಾಗಿದೆ.
ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳ ನಿರ್ದೇಶನದಂತೆ ಪೊಲೀಸ್ ಇಲಾಖೆಯು ಕೂಡಲೆ ಕಾರ್ಯಪ್ರವೃತ್ತರಾಗಿ ನಗರದ ಹೊರ ವಲಯದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಿದ್ದು ಶ್ಲಾಘನೀಯವಾಗಿದ್ದು ಶಿವಮೊಗ್ಗದ ಜನತೆಯ ಪರವಾಗಿ ಯುವ ಕಾಂಗ್ರೆಸ್ ನಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಅಭಿನಂದನೆಗಳನ್ನ ಯುವಕಾಂಗ್ರೆಸ್ ನ ಗಿರೀಶ್ ತಿಳಿಸಿದ್ದಾರೆ.
Victory for social concern - Youth Congress congratulates the district administration
