SUDDILIVE || BHADRAVATHI
ಕಾರು ಬೈಕು ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಗಂಭೀರ- Car and bike collide head-on, biker in serious condition
ಭದ್ರಾವತಿಯ ಗೌಡ್ರಹಳ್ಳಿಯ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಉಂಟಾಗಿದ್ದು ಬೈಲ್ ಸವಾರನ ಸ್ಥಿತಿ ಗಂಭೀರವಾಗಿದೆ. ಆತನನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಭದ್ರಾವತಿಯಿಂದ ಕಿಲ್ವಾಜ್ ಬಿನ್ ಬಾಬು ಎಂಬ 28 ವರ್ಷದ ಯುವಕ ಗೌಡ್ರಹಳ್ಳಿ ಕಡೆ ಬೈಕ್ ನಲ್ಲಿ ಹೋಗುವಾಗ ಸೀಗೆಬಾಗಿ ಹಾಗೂ ಗೌಡ್ರಹಳ್ಳಿಯ ನಡುವೆ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಕಿಲ್ವಾಜ್ ಬಲಕಾಲು ಮೂಳೆ ಮುರಿದಿದೆ. ಪಾದ ಹಿಮ್ಮುಖ ತಿರುಗಿದೆ. ಗಾಯಾಳುಗಳನ್ನ ಮಂಗಳೂರಿಗೆ ಸಾಗಿಸಲಾಗಿದೆ.
ಕಾರು ಹೊಳೆಹೊನ್ನೂರಿನಿಂದ ಭದ್ರಾವತಿ ಕಡೆ ಸಾಗುತ್ತಿತ್ತು ಎನ್ನಲಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Car and bike collide head-on, biker in serious condition
