SUDDILIVE || SHIVAMOGGA
ಕುವೆಂಪು ನಗರ ಬಡಾವಣೆಯಲ್ಲಿ ಬೆಳೆದುಕೊಂಡ ಒಣ ಹುಲ್ಲುಗಳಿಗೆ ದಿಡೀರ್ ಬೆಂಕಿ- Dry grass growing in Kuvempu Nagar area catches fire
ಶಿವಮೊಗ್ಗದ ಕುವೆಂಪುನಗರ ಬಡಾವಣೆಯಲ್ಲಿನ ಖಾಲಿ ಸೈಟುಗಳಲ್ಲಿ ಬೆಳೆದುಕೊಂಡಿರುವ ಒಣಗಿದ ಗಿಡಗಳಿಗೆ ದಿಡೀರ್ ಎಂದು ಬೆಂಕಿ ಹೊತ್ತಿಕೊಂಡಿದ್ದು ಕಿಡಿಗೇಡಿಗಳ ಕೃತ್ಯದ ಶಂಕೆ ವ್ಯಕ್ತವಾಗುತ್ತಿದೆ.
ಕುವೆಂಪು ನಗರ ಬಡಾವಣೆಯ ಚೇತನ್ಯ ಟೆಕ್ನೋ ಶಾಲೆಯ ಬಳಿ ಒಣ ಗಿಡಗಳು ಎದೆ ಮಟ್ಟಕ್ಕೆ ಬೆಳೆದಿದ್ದು ಈ ಹುಲ್ಲುಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಶಂಕಿಸಲಾಗಿದೆ ಕಿಡಿಗೇಡಿಗಳ ಕೃತ್ಯಕ್ಕೆ ಬಡಾವಣೆಯಲ್ಲಿರುವ ಒಣ ಗಿಡಗಳಿಗೆ ಬೆಂಕಿ ಆವರಿಸಿಕೊಂಡಿದೆ.
ಬೆಂಕಿ ಹರಡುವಿಕೆ ಹೆಚ್ಚಾದ ಪರಿಣಾಮ ಸ್ಥಳಕ್ಕೆ ಅಗ್ನಿಶಾಮಕ ದಳ ಸ್ಥಳಕ್ಮೆ ಧಾವಿಸಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಇಲ್ಲಿ ನಿವಾಸಗಳೂ ಇದ್ದು, ನಿವಾಸಿಗಳ ವಾಹನಗಳಾಗಲಿ ಅಥವಾ ಇತರೆ ಪ್ರಾಣ ಹಾನಿಸುದ್ದಿಗಳು ಇನ್ನೂ ಕೇಳಿ ಬಂದಿಲ್ಲ.
Dry grass growing in Kuvempu Nagar area catches fire

