SUDDILIVE || THIRTHAHALLI
ಕೆಎಫ್ ಡಿಗೆ ವರ್ಷದ ಮೊದಲ ಬಲಿ- First victim of the year for KFD
ಹೊಸನಗರದಲ್ಲಿ ತಾಂಡವಾಡುತ್ತಿದ್ದ ಕೆಎಫ್ ಡಿ ತೀರ್ಥಹಳ್ಳಿಯ ಕಟ್ಟೆಹಕ್ಲು ಯುವಕನನ್ನ ಬಲಿಪಡೆದಿದೆ. ತೋಟದಲ್ಲಿ ಹುಲ್ಲು ತೆಗೆಯುವ ಕೃಷಿಕಾರ್ಮಿಕ ಕೆಎಫ್ ಡಿಗೆ ಬಲಿಯಾಗಿದ್ದಾನೆ. ಇದರಿಂದ ಜಿಲ್ಲೆಯಲ್ಲಿ ಕೆಎಫ್ ಡಿಗೆ ಮೊದಲ ಬಲಿಯಾಗಿದೆ.
ತಾಲೂಕಿನ ಕಟ್ಟೆ ಹಾಕುವ ಸಮೀಪದ ಸಸಿ ತೋಟದ ನಿವಾಸಿ ಕಿಶೋರ್ ಕಳೆದ ವಾರ ಅನಾರೋಗ್ಯದಿಂದ ಬಳಲುತ್ತಿದ್ದು ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ತೀರ್ಥಹಳ್ಳಿಯ ಕೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಅವರನ್ನು ಮಂಗಳೂರು ಮಣಿಪಾಲ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿಶೋರ್ ಅನ್ಯ ತಡರಾತ್ರಿ ಸುಮಾರು 2:30 ವೇಳೆಗೆ ಚಿಕಿತ್ಸೆ ಫಲಿಯರ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ ಇದು ಈ ವರ್ಷದ ಮೊದಲನೇ ಬಲಿಯಾಗಿದೆ
ಇದುವರೆಗೂ ಜಿಲ್ಲೆಯಲ್ಲಿ 28 ಜನರಲ್ಲಿ ಕೇಫ್ ಡಿ ಕಾಣಿಸಿಕೊಂಡಿದೆ. ಕೆಲವರು ಇದರಲ್ಲಿ ಕೆಲವರು ಗುಣಮುಖರಾದರೆ ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಜ್ವರ ಮತ್ತು ಮೈಕೈ ನೋವೆಂದು ದಾಖಲಾದ ಕಟ್ಟೆಹಕ್ಲು ಯುವಕ ಸಾವನ್ನಪ್ಪಿದ್ದಾನೆ.
First victim of the year for KFD

