SUDDILIVE || THIRTHAHALLI
ಕಾಲುನೋವಿನಿಂದ ಬಳಲುತ್ತಿದ್ದ ಬಾಣಂತಿ ದಿಡೀರ್ ಸಾವು-Mother dies suddenly after suffering from leg pain
ತೀರ್ಥಹಳ್ಳಿಯಲ್ಲಿ ಕಾಲುನೋವಿನಿಂದ ಬಳಲುತ್ತಿದ್ದ ಬಾಣಂತಿಯೊಬ್ಬರು ಆಸ್ಪತ್ರೆಗೆ ದಾಖಲಾಗಿ ದಿಡೀರೆಂದು ಸಾವುಕಂಡಿರುವ ಘಟನೆ ವರದಿಯಾಗಿದೆ.
ಬಾಣಂತಿಗೆ ಕಾಲು ಕಾಣಿಸಿಕೊಂಡ ಪರಿಣಾಮ ಕುಟುಂಬಸ್ಥರು ಆಂಬುಲೆನ್ಸ್ ಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಕಾರಿನಲ್ಲಿ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆ ಬಾಣಂತಿ ಸಾವುಕಂಡಿದ್ದಾರೆ. ಕಾವ್ಯ 29 ವರ್ಷ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಜನವರಿ 1 ರಂದು ಮಹಿಳೆ ಕಾವ್ಯ ಮಗುವೊಂದಕ್ಕೆ ಜನ್ಮನೀಡಿದ್ದರು. ಆದರೆ ಮಗು ಸಹ ಸಾವನ್ನಪ್ಪಿತ್ತು. ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಪೋಸ್ಟ್ ಆಫೀಸ್ ನ ಪೋಸ್ಟ್ ಮಾಸ್ಟರ್ ಮಂಜುನಾಥ್ ರನ್ನ 7 ವರ್ಷಗಳ ಹಿಂದೆ ಕಾವ್ಯ ಮದುವೆಯಾಗಿದ್ದರು. ತವರು ಮನೆಯಾದ ಕೋಣಂದೂರು ಸಮೀಪದ ದೇಮ್ಲಾಪುರ ಎಂಬ ಗ್ರಾಮದ ಚಿಕ್ಕನಹಳ್ಳಿಯಲ್ಲಿ ಕಾವ್ಯ ತಂಗಿದ್ದರು. ಈ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.
Mother dies suddenly after suffering from leg pain


