ಗಲೀಜಾಗಿದ್ದ ಬಸ್ ನಿಲ್ದಾಣ ಈಗ ಲಕಲಕ ಎಂದು ಹೊಳೆಯುತ್ತಿರುವುದು ಹೇಗೆ?The once-messy bus stop is now gleaming like a beacon

 SUDDILIVE || SHIVAMOGGA

ಗಲೀಜಾಗಿದ್ದ ಬಸ್ ನಿಲ್ದಾಣ ಈಗ ಲಕಲಕ ಎಂದು ಹೊಳೆಯುತ್ತಿರುವುದು ಹೇಗೆ?The once-messy bus stop is now gleaming like a beacon      

Becon, busstop


ರಾಗಿಗುಡ್ಡ ಎಲ್ಲಾದರಲ್ಲೂ ಸದ್ದುಮಾಡುವ ಪ್ರದೇಶವಾಗಿದೆ. ರಾಗಿಗುಡ್ಡದಲ್ಲಿ ಇಷ್ಟುದಿನ ಕೋಮುಗಲಭೆಯ ವಿಷಯದಲ್ಲಿ ಪ್ರಖ್ಯಾತಿ ಪಡೆದಿತ್ತು. ಈಗ ರಾಗಿಗುಡ್ಡದ ಬಸ್ ನಿಲ್ದಾಣಕ್ಕೆ ಸುಣ್ಣಬಣ್ಣ ಹೊಡೆಸುವ ಮೂಲಕ ಪೊಲೀಸರೇ ಸಮಾಜ ಸೇವೆಯ ಹೆಸರಿನಲ್ಲಿ ಮುಂಚೂಣಿಗೆ ಬಂದಿದ್ದಾರೆ. 

ಗುಟ್ಕಾ ಹಾಕೊಂಡು ಕಂಡಕಂಡಲ್ಲಿ ಉಗಿಯುವ ಕಿಡಿಗೇಡಿಗಳಿಗೆ ಈ ಜಗತ್ತಿನಲ್ಲಿ ಕಡಿಮೆಯಿಲ್ಲ. ಆದರೆ ಆ ಗಲೀಜನ್ನ ತೊಳೆದುಹಾಕುವ ಸಾಮಾಜಿಕ ಕೆಲಸ ಮಾಡೋಕೆ ಇರುವರ ಸಂಖ್ಯೆ ಕಡಿಮೆನೆ. ಈ ಸಾಮಾಜಿಕ ಕಾರ್ಯಕ್ಕೆ  ಗ್ರಾಮಾಂತರ ಪೊಲೀಸರು ಕೈಹಾಕಿ ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದಾರೆ. 


ರಾಗಿಗುಡ್ಡ ಮಹಾತ್ಮ ಗಾಂಧಿ  ಸರ್ಕಲ್ ನಲ್ಲಿರುವ ಬಸ್ ನಿಲ್ದಾಣವನ್ನು ಕಿಡಿಗೇಡಿಗಳು ಗುಟ್ಕಾ ತಿಂದು ಉಗಿದು ಬಹಳ ಗಲೀಜು ಮಾಡಿರುವುದನ್ನು ಗಮನಿಸಿದ ಶಿವಮೊಗ್ಗ ಗ್ರಾಮಾಂತರ ಠಾಣೆಯ ಸಿಬ್ಬಂದಿಯಾದ ಶಿವರಾಜ್ ರವರು ಈ ದಿನ ತಮ್ಮ ಸ್ವಂತ ಖರ್ಚಿನಲ್ಲಿ  ಸ್ವಚ್ಛ ಗೊಳಿಸಿ ಹೊಸದಾಗಿ ಬಣ್ಣ ಹೊಡೆಸಿದ್ದಾರೆ. ಅವರಿಗೆ ಶಾಂತಿನಗರದ ಸಮಸ್ತ ಸಭ್ಯಸ್ತರ ಪರವಾಗಿ ಅಭಿನಂದನೆಗಳನ್ನ ಸಲ್ಲಿಸಲಾಗಿದೆ.

The once-messy bus stop is now gleaming like a beacon 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close