ಅರೆಬಿಳಚಿ ಕಾರ್ಯಾಲಯದ ಎದು ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ-The protest in front of the Arabillachi office has entered its third day

 SUDDILIVE || BHADRAVATHI

ಅರೆಬಿಳಚಿ ಕಾರ್ಯಾಲಯದ ಎದು ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ-The protest in front of the Arabillachi office has entered its third day     

Dss, protest

ಭದ್ರಾವತಿ ತಾಲೂಕು ಅರೆಬೆಳಕಿ ಗ್ರಾಮದ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಜನಾಂಗದವರು ವಾಸ ಮಾಡುವ ಕೇರಿಗೆ ಹೋಗುವ ರಸ್ತೆಯನ್ನು ಅಕ್ರಮವಾಗಿ ಅಡ್ಡಗೋಡೆ ನಿರ್ಮಿಸಿ ದೌರ್ಜನ್ಯವೇಶಗುತ್ತಿರುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇಂದು ಡಿಎಸ್ಎಸ್ ಅಂಬೇಡ್ಕರ್ ವಾದ ಹಾಲೇಶಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

ದಾಖಲೆಗಳಲ್ಲಿ ಕೇರಿಗೆ ಹೋಗುವ ರಸ್ತೆಂದು ನಮೂದು ಆಗಿದ್ದರು ಸಹ ರಸ್ತೆಯ ಜಾಗದಲ್ಲಿ ಅಕ್ರಮವಾಗಿ ಅಡ್ಡ ಗೋಡೆ ಶೌಚಾಲಯ ಬೇಲಿಗಳನ್ನು ಕಟ್ಟಿ, ಓಡಾಡಲು ರಸ್ತೆ ಇಲ್ಲದಂತೆ ಮಾಡಿ ದೌರ್ಜನ್ಯ ವಹಿಸುತ್ತಿರುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಅರಬ್ಬಿ ಗ್ರಾಮದ ಆದೇಶ ಕರ್ನಾಟಕ ಜನಾಂಗದವರು ವಾಸವಾಗಿರುವ ಕೇರಿಗೆ ಹೋಗುವ ರಸ್ತೆ ಎಂದು ದಾಖಲೆಗಳಲ್ಲಿ ನಮೂದಾಗಿರುವ ರಸ್ತೆ ಜಾಗದಲ್ಲಿ ಅಕ್ರಮವಾಗಿ ಕಟ್ಟಿರುವ ಅಡ್ಡಗೋಡೆ ಶೌಚಾಲಯ ಬೇಲಿಗಳನ್ನು ತಕ್ಷಣವೇ ಗೊಳಿಸಬೇಕು. 

ಹಲವಾರು ವರ್ಷಗಳಿಂದ ಅರವಳಿಚಿ ಗ್ರಾಮದಲ್ಲಿ ಆದಿ ಕರ್ನಾಟಕ ಜನಾಂಗದವರು ಕೇರಿಗೆ ಓಡಾಡಲು ಇದ್ದ ರಸ್ತೆಯನ್ನು ಅಡ್ಡವಾಗಿ ಗೋಡೆ ಗೋಡೆ ಶೌಚಾಲಯ ಬೇಲಿ ಕಟ್ಟಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದಿ ಕರ್ನಾಟಕ ಜನಾಂಗದವರು ಅರ್ಜಿಗಳನ್ನು ಕೊಟ್ಟರು ಸಹ ಯಾವುದೇ ಕ್ರಮ ವಹಿಸದ ಹರೆಬಿಳುಚಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಹಾಗೂ ಈ ಹಿಂದೆ ಇದ್ದ ಪಿಡಿಒ ಇವರ ಮೇಲೆ ಪರಿಶಿಷ್ಟ ಪ್ರಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವಲ್ಲಿ ವಿಫಲವಾಗಿರುವ ಎಸ್ಸಿ ಎಸ್ ಪಿ ಟಿ ಎಸ್ ಪಿ ಹಣವನ್ನು ಭದ್ರಾವತಿ ತಾಲೂಕು ಅರಕೆರೆ ಗ್ರಾಮದ ಮೇಲ್ವರ್ಗದವರ ತೋಟಗಳಿಗೆ ಹೋಗುವ ರಸ್ತೆಗೆ ಬಳಸಿ ಎಸ್ಸಿ ಎಸ್ಟಿಗೆ ಅನುಕೂಲವಾಗಿದೆ ಎಂದು ಸುಳ್ಳು ವರದಿಯನ್ನು ಸರ್ಕಾರಕ್ಕೆ ನೀಡಿರುವ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು.


ಎಸ್ಸಿ ಎಸ್ ಪಿ/ಟಿ ಎಸ್ ಪಿ ಅನುದಾನದಲ್ಲಿ ಶೌಚಾಲಯ ಬೇಲಿಗಳನ್ನು ತೆರವುಗೊಳಿಸಿ ಬಾಕ್ಸ್ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಿಸಿ ಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇದೆ ವೇಳೆ ಬಂದ ಶವಕ್ಕೆ ಅಂತ್ಯಕ್ರಿಯೆ ನಡೆಸಲು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಾಗವನ್ನು ತೋರಿಸಿ ಅಂತ್ಯಕ್ರಿಯೆಗೆ ಅನುವು ಮಾಡಿಕೊಟ್ಟಿರುವುದು ಗಮನ ಸೆಳೆದಿದೆ.

The protest in front of the Arabillachi office has entered its third day


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close