ತಂದೆ ಬುದ್ದಿ ಹೇಳಿದ್ದಕ್ಕೆ 19 ರ ಯುವಕ ಶವವಾಗಿ ಪತ್ತೆ-19-year-old youth found dead after father's advice

 SUDDILIVE || SHIVAMOGGA

ತಂದೆ ಬುದ್ದಿ ಹೇಳಿದ್ದಕ್ಕೆ 19 ರ ಯುವಕ ಶವವಾಗಿ ಪತ್ತೆ-19-year-old youth found dead after father's advice 

Father, dead

ಹಾಸನ ಜಿಲ್ಲೆಯ ಸಕಲೇಶ​​ಪುರ ಮೂಲದ ಯುವಕನೊಬ್ಬ ನಗರದ ಹೊರವಲಯದ ಪುರಲೆ ಕೆರೆಗೆ ಹಾರಿ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ. ಸಕಲೇಶ್​​ಪುರದ ಸಂಕೇತ್​​ (19) ಆತ್ಮಹತ್ಯೆಗೆ ಶರಣಾದ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ. 

ಘಟನೆಯ ವಿವರ

ಪ್ರಾಥಮಿಕ ಮೂಲಗಳ ಮಾಹಿತಿ ಪ್ರಕಾರ, ಮೃತ ಸಂಕೇತ್ ಇತ್ತೀಚೆಗಷ್ಟೇ ತನ್ನ ಐಟಿಐ (ITI) ವ್ಯಾಸಂಗವನ್ನು ಮುಗಿಸಿದ್ದನು. ಆದರೆ ಮುಂದೆ ಯಾವುದೇ ಕೆಲಸಕ್ಕೆ ಸೇರದೆ ಮನೆಯಲ್ಲೇ ಖಾಲಿ ಉಳಿದಿದ್ದನು. ಈ ಕಾರಣದಿಂದಾಗಿ ಆತನ ತಂದೆಯು ಕೆಲಸಕ್ಕೆ ಹೋಗುವಂತೆ ಮಗನಿಗೆ ತಿಳಿಹೇಳಿ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಬೇಸತ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Dead, father


ಆತ್ಮಹತ್ಯೆ ಮಾಡಿಕೊಂಡ ಘಟನೆಯು ಮೂರು ದಿನಗಳ ಹಿಂದೆಯೇ ಸಂಭವಿಸಿದೆ ಎನ್ನಲಾಗಿದ್ದು, ಇಂದು ಪುರಲೆ ಕೆರೆಯಲ್ಲಿ ಯುವಕನ ಶವ ತೇಲುತ್ತಿರುವುದು ಪತ್ತೆಯಾಗಿದೆ. ನೀರಿನ ಮೇಲ್ಭಾಗಕ್ಕೆ ಬಂದಿದ್ದ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನ ಗಮನಿಸಿದ ಸ್ಥಳೀಯ ನಿವಾಸಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.

19-year-old youth found dead after father's advice 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close