SUDDILIVE|| SHIVAMOGGA
ಶಿವಮೊಗ್ಗ ಜಿಲ್ಲಾ N S U I ವತಿಯಿಂದ ಸಂಭ್ರಮಾಚರಣೆ- Celebration by Shivamogga District N S U I
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಯುವಕ, ಯುವತಿಯರಿಗೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿರುವ D. K. Shivakumar ಅವರು, ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಘೋಷಿಸಿದ್ದಾರೆ.
ಈ ಜನಪರ ಹಾಗೂ ವಿದ್ಯಾರ್ಥಿ ಸ್ನೇಹಿ ನಿರ್ಧಾರವನ್ನು ಸ್ವಾಗತಿಸಿ, National Students' Union of India (NSUI) ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿ ಸಂಭ್ರಮಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ N.S.U.I ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ್ ,ನಗರ ಅದ್ಯಕ್ಷ ರವಿ ನಗರ ಉಪಾಧ್ಯಕ್ಷರಾದ ಅಬ್ದುಲ್ ಸುಭಾನ್ ,ಆದಿತ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಾಜಿ ರಾವ್ ವರುಣ್ ಹಾಗೂ ಯುಸೂಪ್ ಟೊಪಿಕ್ ಶ್ರೀಕಾಂತ್,ಹಾಲಸ್ವಾಮಿ
ಮಹಾದೇವ ಹಿರೇಮಠ, ಜೀವಿತ್,ಶಶಿಕಲಾ,ಸೃಜನ್ ,ದೀಪಕ್,ಅಭಿಲಾಷ್,ಲೋಹಿತ್ ,ಚೇತನ್,ಅನಿರುಧ್,ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Celebration by Shivamogga District N S U I

