ಬೆಂಗಳೂರಿನ ಪ್ರತಿಭಟನೆಗೆ ಹೋಗುವುದಾಗಿ ಹೇಳಿ ಹೋದ ಗುತ್ತಿಗೆ ನೌಕರ ನಾಪತ್ತೆ- Contract worker who said he would go to protest in Bengaluru goes missing

 SUDDILIVE || SHIVAMOGGA

ಬೆಂಗಳೂರಿನ ಪ್ರತಿಭಟನೆಗೆ ಹೋಗುವುದಾಗಿ ಹೇಳಿ ಹೋದ ಗುತ್ತಿಗೆ ನೌಕರ ನಾಪತ್ತೆ- Contract worker who said he would go to protest in Bengaluru goes missing   

Contract, protest

ಶಿವಮೊಗ್ಗ, ಜು.24: ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿರುವ ಹೆಚ್.ಎಂ. ಪೆಟ್ರೋಲ್ ಬಂಕ್‌ನಿಂದ ಬೆಂಗಳೂರಿಗೆ ತೆರಳುವುದಾಗಿ ತಿಳಿಸಿ ಹೊರಟಿದ್ದ ಗ್ರಾಮ ಪಂಚಾಯಿತಿ ಗುತ್ತಿಗೆ ನೌಕರನೊಬ್ಬ ನಿಗೂಢವಾಗಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾದ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪೊಲೀಸರ ದಾಖಲೆಯ ಪ್ರಕಾರ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಫಲವನಹಳ್ಳಿ ಗ್ರಾಮದ ನಿವಾಸಿ ಪ್ರಶಾಂತ್ (34) ಗ್ರಾಮ ಪಂಚಾಯಿತಿಯಲ್ಲಿ ಗುತ್ತಿಗೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಸಂಬಂಧಿ ನಾಗರಾಜಪ್ಪ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಬೆಂಗಳೂರಿಗೆ ಹೋಗುವುದಾಗಿ ಹೇಳಿ ತೆರಳಿದ್ದ

ಜುಲೈ 22ರಂದು ಬೆಳಗ್ಗೆ ಸುಮಾರು 11.40 ಗಂಟೆಗೆ ಪ್ರಶಾಂತ್ ತಮ್ಮ ದ್ವಿಚಕ್ರ ವಾಹನದಲ್ಲಿ ಶಿವಮೊಗ್ಗದ ದುರ್ಗಿಗುಡಿಯಲ್ಲಿರುವ ಹೆಚ್.ಎಂ. ಪೆಟ್ರೋಲ್ ಬಂಕ್‌ಗೆ ಬಂದು, ಅಲ್ಲಿ ಕೆಲಸ ಮಾಡುತ್ತಿರುವ ತಮ್ಮ ಅಣ್ಣ ರಂಗಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ "ಸ್ಟ್ರೈಕ್ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದೇನೆ" ಎಂದು ತಿಳಿಸಿ, ತಮ್ಮ ಬೈಕ್ ಅನ್ನು ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ ಅಲ್ಲಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂಶಯ ಮೂಡಿದ ಕುಟುಂಬಸ್ಥರು

ನಂತರ ಕುಟುಂಬಸ್ಥರಿಗೆ ಅನುಮಾನ ಉಂಟಾಗಿ ಗ್ರಾಮ ಪಂಚಾಯಿತಿಗೆ ವಿಚಾರಿಸಿದಾಗ, ಬೆಂಗಳೂರಿನಲ್ಲಿ ಯಾವುದೇ ಧರಣಿ ಅಥವಾ ಸ್ಟ್ರೈಕ್ ಇಲ್ಲ ಎಂಬ ಮಾಹಿತಿ ದೊರೆತಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪ್ರಶಾಂತ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದರೂ, ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಇದುವರೆಗೆ ಸಂಪರ್ಕ ಸಾಧ್ಯವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸರ ತನಿಖೆ ಆರಂಭ

ಕಾಣೆಯಾದ ವೇಳೆ ಪ್ರಶಾಂತ್ ಖಾಕಿ ಬಣ್ಣದ ಪ್ಯಾಂಟ್ ಹಾಗೂ ಚೌಕಳಿ ವಿನ್ಯಾಸದ ಶರ್ಟ್ ಧರಿಸಿದ್ದರು. ಸುಮಾರು 5 ಅಡಿ ಎತ್ತರ, ದುಂಡನೆಯ ಮುಖ ಮತ್ತು ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Contract worker who said he would go to protest in Bengaluru goes missing 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close