ಬಿಜೆಪಿಯಿಂದ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಡಾ.ಧನಂಜಯ್ ಸರ್ಜಿ ಸ್ಪರ್ಧೆ

ಸುದ್ದಿಲೈವ್/ಶಿವಮೊಗ್ಗ

ಕೊನೆಗೂ ಬಿಜೆಪಿಯ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನ ಪ್ರಕಟಿಸಿದೆ. ಬಿಜೆಪಿಗೆ 5 ಸ್ಥಾನ,  ಜೆಡಿಎಸ್ ಗೆ 1 ಕ್ಷೇತ್ರ ಹಂಚಿಕೊಂಡಿದೆ.

ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಅಮರನಾಥ್ ಪಾಟೀಲ್ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಧನಂಜಯ್ ಸರ್ಜಿ, ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಎ. ದೇವೇಗೌಡ,ಅಗ್ನೆಯ  ಶಿಕ್ಷಕರ ಕ್ಷೇತ್ರಕ್ಕೆ ನಾರಾಯಣ ಸ್ವಾಮಿ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಇಸಿ ಲಿಂಗರಾಜು ರನ್ನ ನೇಮಿಸಲಾಗಿದೆ.

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಜೆಡಿಎಸ್ ನ‌ ಬೋಜೇಗೌಡರನ್ನ ಪ್ರಕಟಿಸಲಾಗಿದೆ. ನೈರುತ್ಯ ಪದವೀಧರ ಕ್ಷೇತ್ರಕ್ಕೆ, ಉಡುಪಿಯ ಮಾಜಿ ಶಾಸಕರಘುಪತಿ ಭಟ್, ದತ್ತಾತ್ರಿ, ಡಾ.ಸರ್ಜಿ, ಹಾಗೂ ವಕೀಲ ಪ್ರವೀಣರ ಹೆಸರು ಮುನ್ನಾಲೆಯಲ್ಲಿತ್ತು. ಆದರೆ ಬಿಜೆಪಿ ಹೈಕಮ್ಯಾಂಡ್ ಡಾ.ಸರ್ಜಿ ಹೆಸರನ್ನ ಫೈನಲ್ ಮಾಡಿದೆ.

ಇದನ್ನೂ ಓದಿ-https://suddilive.in/archives/14630

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close