ಒಂದು ಲಾರಿ ತುಂಬ ಕೊಂಬುಗಳು, ಮೂಳೆ, ಚರ್ಮಗಳು ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಒಂದು ಲಾರಿ ತುಂಬ ಗೋವಿನ ಕೊಂಬು, ಮೂಳೆ, ಚರ್ಮಗಳು ಪತ್ತೆಯಾಗಿವೆ. ಇದು ಹತ್ಯೆಯಾದ ಗೋವಿನ ಪಳುವಳಿಕೆ ಎಂಬುದು ಹಿಂದೂ ಸಂಘಟನೆ ಆರೋಪಿಸಿದೆ.

ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದನದ ಮೂಳೆಗಳು ಮತ್ತು ದನದ ಕೊಂಬುಗಳು ತುಂಬಿದ್ದ ಲಾರಿಯನ್ನು ಸ್ಥಳಿಯರು ಮತ್ತು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸುದ್ದಾರೆ.

ಸುಮಾರು ಒಂದು ಟನ್ ಗು ಅಧಿಕ ಮೂಲೆಗಳನ್ನ, ಕೊಂಬುಗಳು ಮತ್ತು ಚರ್ಮವನ್ನ ಗೋಣಿ ಚೀಲಗಳಲ್ಲಿ ತುಂಬಿಡಲಾಗಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಈ ಗೋವಿನ ಪಳುವಳಿಕೆಗಳನ್ನ ಸಾಗಿಸಲು ಯತ್ನಿಸುವ ವೇಳೆ ಕಾರ್ಯಕರ್ತರು ತಡೆದು ಪರಿಶೀಲಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ-https://suddilive.in/archives/16884

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close