ಪತ್ರಕರ್ತರ ಮೇಲೆ ಇನ್ ಸ್ಪೆಕ್ಟರ್ ಅಶ್ವಥ್ ಗೌಡ ದರ್ಪ



ಸುದ್ದಿಲೈವ್/ತೀರ್ಥಹಳ್ಳಿ


ಪತ್ರಕರ್ತನ ಮೇಲೆ ತೀರ್ಥಹಳ್ಳಿ ಪಿಎಸ್ಐ ಅಶ್ವಥ್ ಗೌಡ ದರ್ಪ ಮೆರೆದಿದ್ದಾರೆ. ಶಿವಮೊಗ್ಗ ಜಿಲ್ಲಾ ಎಸ್ಪಿ ಭೇಟಿ ನೀಡಿದ ವೇಳೆಯಲ್ಲೇ ಸ್ಥಳೀಯ ಪೊಲೀಸರು ಅಟ್ಟಹಾಸ ಮೆರೆದಿದ್ದಾರೆ. 


ತೀರ್ಥಹಳ್ಳಿಗೆ ಎಸ್ಪಿ ಭೇಟಿ ನೀಡಿದ್ದಾರೆ.  ಸ್ಟೇಷನ್‌ಗೆ ತೆರಳುವಾಗ ದಾರಿಯಲ್ಲಿ ಜನಸಂದಣಿಯಾಗಿದೆ. ನಿಯಂತ್ರಿಸುವ ಭರಾಟೆಯಲ್ಲಿ ಇನ್ಸ್‌ಪೆಕ್ಟರ್‌ ಅಶ್ವತ್ಥಗೌಡ ಪತ್ರಕರ್ತರನ್ನ ಅವ್ಯಾಚ್ಯ ಶಬ್ದಗಳ ಪದ ಬಳಕೆ ಮಾಡಿದ್ದಾರೆ. 


ಸಾರ್ವಜನಿಕರಿಗೆ ಸಾರ್ವಜನಿಕವಾಗಿ ಅವ್ಯಾಚ್ಯ ಶಬ್ಧಗಳಲ್ಲಿ  ಇನ್ಸ್‌ಪೆಕ್ಟರ್‌ ಅವ್ಯಾಚ್ಯಶಬ್ದಗಳನ್ನ ಬಳಸುತ್ತಿರುವುದನ್ನ ಪತ್ರಕರ್ತ ವಿ ನಿರಂಜನ್ ಈ ದೃಶ್ಯಾವಳಿಗಳನ್ನ  ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ‘ಪ್ರಜಾವಾಣಿ’ಯ ತೀರ್ಥಹಳ್ಳಿ ತಾಲೂಕು ಅರೆಕಾಲಿಕ ವರದಿಗಾರ ನಿರಂಜನ್  ವಿಡಿಯೋ ಡಿಲೀಟ್‌ ಮಾಡುವಂತೆ ಇನ್ಸ್‌ಪೆಕ್ಟರ್, ಜೀಪು ಚಾಲಕ ಸಿಬ್ಬಂದಿಯಿಂದ ಬೆದರಿಕೆ ಹಾಕಿದ್ದಾನೆ. 


ಬಳಿಕ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಮಯದಲ್ಲಿ ದೈಹಿಕ ಹಲ್ಲೆಗೂ ಇನ್ಸ್‌ಪೆಕ್ಟರ್‌ ಅಶ್ವತ್ಥಗೌಡ ಮುಂದಾಗಿದ್ದಾರೆ. ಬಲವಂತವಾಗಿ ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡಿಸಿರುವುದಾಗಿ ತಿಳಿದು ಬಂದಿದೆ. ಸದ್ಯ ಠಾಣೆಯ ಮುಂದೆ  ತೀರ್ಥಹಳ್ಳಿಯ ಪತ್ರಕರ್ತರು ಧರಣಿಗೆ ಮುಂದಾಗಿದ್ದಾರೆ. 


ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯ ವೇಳೆಯೂ ಸುದ್ದಿಲೈವ್ ನ್ಯೂಸ್ ವೆಬ್ ಪೇಜ್ ನ್ನ ತಡೆದು ವಾಪಾಸ್ ಕಳುಹಿಸಿದ್ದ ಅಶ್ವಥ್ ಗೌಡ ಪತ್ರಕರ್ತರು ಸುದ್ದಿ ಮಾಡಲು ಬಿಡಿ ಎಂದು ಕೇಳಿದರೂ ಬಿಟ್ಟಿರಲಿಲ್ಲ. ಖಡಕ್ ಅಧಿಕಾರಿ ಎನಿಸಿಕೊಳ್ಳಬೇಕೆಂಬ ಭ್ರಮೆಯಲ್ಲಿ ಇಂದು ಈ ರೀತಿ ನಡೆದು‌ಕೊಂಡಿರಬಹುದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close