ಸುದ್ದಿಲೈವ್/ಶಿವಮೊಗ್ಗ
ನಬಾರ್ಡ್ ನಿಂದ ಸಹಕಾರಿ ಬ್ಯಾಂಕ್ ಗಳಿಗೆ ಬರುವ ಸ್ಯಾಚ್ಯುಟರಿ ಅನುದಾನ ಕಡಿಮೆಯಾಗಿದ್ದು ಈ ಕುರಿತು ಸಿದ್ದರಾಮಯ್ಯನವರು ಕೇಂದ್ರ ಸಚಿವರ ಜೊತೆ ಮಾತನಾಡಿ ಹೆಚ್ಚಿನ ಅನುದಾನ ಬಿಡುಗಡೆಗೆ ಕೋರಿಕೆ ಇಟ್ಟಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನವಾರ್ಡ್ ತಾರತಮ್ಯ ವಿರುದ್ಧ ಮಾತನಾಡಿದ ಅಧ್ಯಕ್ಷರು, 5000 ಸಾವಿರ ಕೋಟಿ ಬೇಡಿಕೆ ಇಡಲಾಗಿತ್ತು. ಆದರೆ ಬಿಡುಗಡೆಯಾಗಿದ್ದು 2 ಸಾವಿರ ಕೋಟಿ ರೂ. ಹಣವನ್ನ ನಬಾರ್ಡ್ ಬಿಡುಗಡೆ ಮಾಡಿದೆ. ಇದರಿಂದ ನಮ್ಮ ಬ್ಯಾಂಕ್ ಗೆ ಹೊರೆ ಬೀಳಲಿದೆ. 23 ಕೋಟಿ ಸರ್ಕಾರದಿಂದ 61 ಕೋಟಿ ಕೇಂದ್ರದಿಂದ ಹಣ ನಾಲ್ಕುವರ್ಷದಿಂದ ಬರಬೇಕಿದೆ ಎಂದು ದೂರಿದರು.
ಸರ್ಕಾರ ಪ್ರಾಥಮಿಕ ಮತ್ತು ಡಿಸಿಸಿ ಬ್ಯಾಂಕ್ ಗೆ ಈ ರೀತಿಯ ಹಣ ತಡೆಯಬಾರದು. ಹವಮಾನ ಆಧಾರಿತ ಬೆಳೆ ವಿಮೆಯನ್ನ ಶಿವಮೊಗ್ಗದಲ್ಲಿ 23 ಕೋಟಿ ಪ್ರೀಮಿಯಂ ಕಟ್ಟಿದ್ದಾರೆ. ಶುಂಠಿ ಮತ್ತು ಕಾಳುಮೆಣಸಿಗೆ 45.19 ಕೋಟಿ ಬೆಳೆ ವಿಮೆ ಬಂದಿದೆ. ಸರ್ಕಾರ ಆಯ್ಕೆಯಾದ ಇನ್ಸುರೆನ್ಸ್ ಕಂಪನಿ ಪ್ರೀಮಿಯಂ ಕಟ್ಟಿಸಿಕೊಂಡಿದ್ದಾರೆ. ವಿಮಾ ಕಚೇರಿ ಸ್ಥಳೀಯವಾಗಿ ಇಲ್ಲ. ಡಿಸಿ, ಕೃಷಿ ಇಲಾಖೆಗೆ ಗೊತ್ತಿಲ್ಲ ಎನ್ನುತ್ತಾರೆ ಎಂದು ದೂರಿದರು.
ಕಂಪನಿಯ ಕಚೇರಿಯನ್ನ ತೆರೆಯಬೇಕು. ರೈನ್ ಗೇಜ್ ಗಳ ಮೂಲಕ ಅಳತೆ ಮಾಡಿ ಬೆಳೆ ವಿಮೆ ಮಾಡಲಾಗುತ್ತಿದೆ. ಎಷ್ಟೋ ಕಡೆ ರೈನ್ ಗೇಜ್ ಗಳೆ ಇಲ್ಲ. ಮುಂದಿನ ವರ್ಷ ರೈನ್ ಗೇಜ್ ಸರಿಯಾದ ವರ್ಕ್ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆಯಬೇಕಿದೆ ಎಂದರು.
ಬೆಳೆ ವಿಮೆ ಹಾಕಿದ9 ಸಾವಿರ ರೈತರಿಗೆ 19 ಕೋಟಿ ಬೆಳೆ ವಿಮೆ ಬಂದಿದೆ ಶಿವಮೊಗ್ಗದಲ್ಲಿ 59 ಸಾವಿರ ಅರ್ಜಿ 22 ಸಾವಿರ ಕೋಟಿ ಪ್ರೀಮಿಯಂ ಕಟ್ಟಿದ್ದಾರೆ. ಆದರೆ ಶಿಕಾರಿಪುರಕ್ಕೆ 2 ಕೋಟಿಗೂ ಹೆಚ್ಚು ಹಣ ಬಂದಿದೆ. ಈ ತಾಲೂಕಿನಲ್ಲಿ 12 ಸಾವಿರ ಜನ ರೈತರು ಅರ್ಜಿ ಸಲ್ಲಿಸಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ 1200 ಜನ ರೈತ ತಾಲೂಕಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಗೆ 22 ಕೋಟಿ ಬಿಡುಗಡೆಯಾಗಿದ್ದು, ನಮ್ಮ ಬ್ಯಾಂಕ್19 ನಿಂದ ಬೆಳೆ ವಿಮೆ ಬಂದಿದೆ. ಇದು ಪರಿಷ್ಕರಣೆ ಆಗಬೇಕು ಎಂದರು.
ಹಾಲು ಉತ್ಪಾದಕರ ಜಿರೋ ಬ್ಯಾಲೆನ್ಸ್ ನಲ್ಲಿ ಬ್ಯಾಂಕ್ ಅಕೌಂಟ್ ಒಪನ್ ಮಾಡಿ ಎಟಿಎಮ್, ಕ್ರೆಡಿಟ್ ಕಾರ್ಡ್ ವಿತರಿಸಲಾಗುವುದು. ಮನೆ ಬಾಗಿಲಿಗೆ ಸೇವೆ ನೀಡಲು ಸಿದ್ದರಿದ್ದೇವೆ. ಗ್ರಾಮೀಣ ಭಾಗದ ಪ್ರಾಥಮಿಕ ಬ್ಯಾಂಕ್ ಗಳ ವ್ಯವಹಾರದ ಮೇಲೆ ಜಿಲ್ಲೆಯ ಮೂರು ಪ್ರೈಮರಿಸೊಸೈಟಿ ಮೇಲೆ 3 ಕೋಟಿ ತೆರಿಗೆ ಕಟ್ಟಲು ಸೂಚಿಸಲಾಗಿದೆ. ಇವುಗಳ ಆಸ್ತಿ ಮನನ ಅರಿದರೂ 1.5 ಕೋಟಿ ದಾಟಲ್ಲ. ಇದು ಮುಂದಿವರೆದರೆ ಪ್ರಾಥಮಿಕ ಬ್ಯಾಂಕ್ ಗಳನ್ನ ಮುಚ್ಚಲಾಗುವುದು ಎಂದು ಆಕ ವ್ಯಕ್ತಪಡಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ನಲ್ಲಿ ಹೆಚ್ಚುಕಡಿಮೆಯಾದರೆ ಫ್ರಂಟ್ ಪೇಜ್ ನಲ್ಲಿ ಸುದ್ದಿ ಬರುತ್ತೆ!
ಗುರು ರಾಘವೇಂದ್ರ ಕೋಆಪರೇಟಿವ್ ಸೊಸೈಟಿ ಮುಚ್ಚಿಹೋಯಿತು. ಯಾರೂ ಮಾತನಢಲಿಲ್ಲ. ಹೊಸನಗರದಲ್ಲಿ ಈ ಸೊಸೈಟಿಯ 120 ಕೋಟಿ ಹಣ ಡಿಪಾಸಿಟ್ ಇತ್ತು. ಈ ಬಗ್ಗೆ ಯಾರೂ ಮಾತನಾಡಲಿಲ್ಲ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೆ ಮಾಧ್ಯಮಗಳಲ್ಲಿ ದೊಡ್ಡದಾದ ಹೆಡ್ಡಿಂಗ್ ನಲ್ಲಿ ಬರಲಿದೆ ಎಂದು ದೂರಿದರು
ನಬಾರ್ಡ್ ಬೇಡ,
1200 ಕೋಟಿಯಷ್ಟು ಸ್ವಂತ ಬಙಡವಾಳ ಹೂಡಿಕೊಂಡು ಡಿಸಿಸಿ ಬ್ಯಾಂಕ್ ದು ಇದೆ. ಅವರು ಕಮರ್ಷಿಯಲ್ ಆಗಿದೆ. ಶಿವಮೊಗ್ಗ ಜಿಲ್ಲೆಯ ಡಿಸಿಸಿ ಬ್ಯಾಂಕ್ ಗೆ ನಬಾರ್ಡ್ ಸಹಾಯ ಬೇಡ. ಆದರೆ ಅವರಾಗೆ ಆರಂಭವಾಗಿದೆ. 7 ಡಿಸಿಸಿ ಬ್ಯಾಂಕ್ ಗಳು ರಾಜ್ಯದಲ್ಲಿ ರೋಗಪೀಡಿತವಾಗಿದೆ. ಹಾಗಾಗಿ ರಾಜ್ಯ ಸರ್ಕಾರಗೆ ನಬಾರ್ಡ್ ಅವಶ್ಯಕತೆ ಇದೆ ಎಂದರು.