ಸುದ್ದಿಲೈವ್/ಶಿವಮೊಗ್ಗ
ಇಂದು ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಶಾಸಕರ ಕಚೇರಿ (office) ಕರ್ತವ್ಯ ಭವನದಲ್ಲಿ ಮಹಾನಗರ ಪಾಲಿಕೆ ಆಯುಕ್ತರು, ಕಂದಾಯ ವಿಭಾಗದ ಅಧಿಕಾರಿಗಳು, ಉಪನೋಂದಣಿ(sub register) ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಸಂಘ (ಆಟೋ ಕಾಂಪ್ಲೆಕ್ಸ್), ಸಣ್ಣ ಕೈಗಾರಿಕೆಗಳ ಸಂಘ, ಚೇಂಬರ್ ಆಫ್ ಕಾಮರ್ಸ್ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರೊಂದಿಗೆ 'ಇ-ಸ್ವತ್ತು' ಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಗಳ ಕುರಿತು ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಇ-ಸ್ವತ್ತು ಗೆ ಸಂಬಂಧಿಸಿದಂತೆ ಅಸಮರ್ಪಕವಾಗಿ ದಾಖಲಾತಿಯನ್ನು ಸಾರ್ವಜನಿಕರಿಗೆ ಕೇಳುವುದರಿಂದ ತೊಂದರೆಯಾಗುತ್ತಿದ್ದು ಈ ಬಗ್ಗೆ ಸರಳಿಕರಣಗೊಳಿಸಲು ತಿಳಿಸಲಾಯತು.
ಇ-ಸ್ವತ್ತು ನೋಂದಣಿಯ ಸಂದರ್ಭದಲ್ಲಿ EC ನೀಡುವಲ್ಲಿ ವಿಳಂಬವಾಗದಂತೆ ಕ್ರಮವಹಿಸಲು ಉಪನೋಂದಣಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಇ-ಸ್ವತ್ತು ಗೆ ಸಂಬಂಧಿಸಿದಂತೆ ನಿನ್ನೆ ಶಾಸಕರು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರನ್ನು ಭೇಟಿ ಮಾಡಿ, ಆಸ್ತಿ ನೋಂದಣಿ ಇ-ಸ್ವತ್ತು ಕಡ್ಡಾಯ ಮಾಡಿರುವುದನ್ನು ಕನಿಷ್ಠ ಆರು ತಿಂಗಳು ಸರ್ಕಾರ ಮುಂದೂಡುವಂತೆ ಕೋರಿದ್ದು, ಇಂದು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.