It has been reported that a young man who had gone to catch fish in a pond in Shimoga rural area drowned.
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಹೊಂಡದಲ್ಲಿ ಮೀನಿಗಾಗಿ ಬೀಸಿದ್ದ ಬಲೆಯಿಂದ ಮೀನು ಹಿಡಿಯಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿರುವ ಘಟನೆ ವರದಿಯಾಗಿದೆ.
ಕುಂಸಿಯ ನೀರಲಗಿ ಹೊಂಡದಲ್ಲಿ ಮೀನು ಹಿಡಿಯಲು ಬೆಸ್ತರು ಬಲೆ ಬೀಸಿದ್ದರು. ಈ ಬೀಸಿದ್ದ ಬಲೆಯಿಂದ ಮೀನು ಹಿಡಿಯಲು ಮುಂದಾದ ಯುವಕ ಶಿವಕುಮಾರ್(30) ನೀರಿನ ಹುಸುಗಿನಲ್ಲಿ ಸಿಕುಕಿ ಸಾವನ್ನಪ್ಪಿದ್ದಾನೆ.
ಕುಂಸಿಯ ಶಿವಕುಮಾರ್ ಇಂದು ಮಧ್ಯಾಹ್ನ ನೀರಲಗಿ ಹೊಂಡಕ್ಕೆ ಇಳಿದಿದ್ದಾನೆ. ಮದ್ಯ ವ್ಯಸನ ಮಾಡಿ ಮೀನುಗಳನ್ನ ಹಿಡಿಯಲು ಮುಂದಾಗಿ ಈ ಘಟನೆಗೆ ಕಾರಣನಾಗಿದ್ದಾನೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ