Suddilive || Shivamogga
Government changed the district waqf officer, ಶಿವಮೊಗ್ಗ ಜಿಲ್ಲಾ ವಕ್ಫ್ ಅಧಿಕಾರಿಯ ಬದಲಾವಣೆ
ಶಿವಮೊಗ್ಗ ಜಿಲ್ಲಾ ವಕ್ಫ್ ಅಧಿಕಾರಿ ಹುದ್ದೆಯಲ್ಲಿ ಬದಲಾವಣೆ ಮಾಡಲಾಗಿದ್ದು ಮೆಹತಾಬ್ ಸರ್ವರ್ ಅವರ ಜಾಗಕ್ಕೆ ಸಯ್ಯದ್ ಜುನೈದ್ ಪಾಷಾರನ್ನ ನೇಮಿಸಿ ಸರ್ಕಾರ ಆದೇಶಿಸಿದೆ.
ಶಿವಮೊಗ್ಗದ ಕಳೆದ ಕೆಲವು ದಿನಗಳಿಂದ ಜಿಲ್ಲಾ ವಕ್ಫ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಅವರ ಬದಲಾವಣೆಗೆ ಹಲವು ಪ್ರಯತ್ನ ನಡೆದಿತ್ತು. ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳ ಮದ್ಯ ಪ್ರವೇಶವೂ ನಡೆದ ಪರಿಣಾಮ ಸೈಯ್ಯದ್ ಮೆಹತಾಬ್ ಅವರ ಬದಲಾವಣೆಗೆ ಒತ್ತಡವೂ ನಿರ್ಮಾಣವಾಗಿತ್ತು. ಇವರ ಸ್ಥಾನಕ್ಕೆ ಕೆಎಂಡಿಸಿ ಜಿಲ್ಲಾ ಅಧಿಕಾರಿ ಸಯ್ಯದ್ ಜುನೈದ್ ಪಾಷಾ ಅವರನ್ನ ತಾತ್ಕಾಲಿಕ ಜಿಲ್ಲಾ ವಕ್ಫ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಈ ಸಂಬಂಧ ಆದೇಶ ಹೊರಡಿಸಿದ್ದು, ವಕ್ಫ್ ಬೋರ್ಡ್ನ ಸುಧಾರಣೆ ಹಾಗೂ ಸಾರ್ವಜನಿಕ ಸೇವೆಗಳ ಸುಗಮತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಯ್ಯದ್ ಜುನೈದ್ ಪಾಷಾ ಮುಂದಿನ ಆದೇಶಗಳವರೆಗೆ ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಅಚ್ಚರಿಯ ಬೆಳವಣಿಗೆ
ಸಯ್ಯದ್ ಮೆಹತಾಬ್ ಸರ್ವರ್ ಅವರನ್ನು ವಜಾಗೊಳಿಸುವಂತೆ ಕಳೆದ ಕೆಲ ದಿನಗಳಿಂದ ವಕ್ಫ್ ಬೋರ್ಡ್ ಮತ್ತು ಮುಸ್ಲಿಂ ಹಾಸ್ಟೆಲ್ ಗೆ ಸಂಬಂಧಿಸಿದ ಹಲವಾರು ಮುಖಂಡರು ಹಾಗೂ ಹಾಸ್ಟೆಲ್ನ ಹಳೆಯ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಜಿಲ್ಲಾ ವಕ್ಫ್ ಕಚೇರಿಯಲ್ಲಿ ತಾನಾಶಾಹಿ ಆಡಳಿತ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿತ್ತು, ಪ್ರತಿಭಟನೆ ನಡೆಸಿ ಎರಡು ಮೂರು ದಿನಗಳಲ್ಲಿ ಅಧಿಕಾರಿಯ ಬದಲಾವಣೆ ಆಗುತ್ತೆ ಎಂದರೆ ಅದು ಅಚ್ಚರಿಯ ಬೆಳವಣಿಗೆಯೂ ಹೌದು.