suddilive || Shivamogga
ಎರಡೂ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಆಮ್ ಆದ್ಮಿ ಪಕ್ಷ ಸುದ್ದಿಗೋಷ್ಠಿ -Aam Aadmi Party press conference against price hike policy of both governments
ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಆಮ್ ಆದ್ಮಿ ಪಾರ್ಟಿ ಇಂದು ಸುದ್ದಿಗೋಷ್ಟಿ ನಡೆಸಿ ಖಂಡಿಸಿದೆ.
ಮನೋಹರ ಗೌಡ ಮಾತನಾಡಿ, ಇಂಧನ ದರ ಕಡಿಮೆಯಾಗುತ್ತಿದ್ದರೂ ಬೆಲೆ ಏರಿಕೆ ಮಾಡಿ ಜನರ ರಕ್್ ಹೀರುತ್ತಿದೆ. ಮಾದರಿಯಾಗಬೇಕಿದ್ದ ಎರಡೂ ಸರ್ಕಾರಗಳು ಗೋಮುಖ ವ್ಯಘ್ರದಂತೆ ವರ್ತಿಸುತ್ತಿದೆ ಎಂದು ದೂರಿದರು.
ಪೆಟ್ರೋಲ್, ಗ್ಯಾಸ್, ಸಾಮಾನ್ಯ ಇನ್ಸುರೆನ್ಸ್ ಮೇಲೂ ಜೊಎಸ್ ಟಿಗಳನ್ನ ಹಾಕಲಾಗುತ್ತಿದೆ. ಇಂಧನ ದರ ಏರಿಸುತ್ತಿರುವುದು ಎರಡೂ ಸರ್ಕಾರ ದ್ವಿಮುಖ ನೀತಿಯಾಗಿದೆ. ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಇಬ್ಬರೂ ಕೂಡಲೇ ಮಧ್ಯ ಪ್ರವೇಶಿಸಿ ಇಂಧನ ದರ ಏರಿಕೆಯ ಬಗ್ಗೆ ಕ್ರಮ ಜರುಗಿಸಬೇಕೆಂದರು.
Aam Aadmi Party press conference