Suddilive || Shivamogga
ಜಾತಿಗಣತಿಯಲ್ಲಿ ಮೂಲ ಜಾತಿ ನಮೂದಿಸಿ-ಶೇಖರಪ್ಪ ಮನವಿ-Shekharappa appeals to include original caste in caste census
ಆದಿ ದ್ರಾವಿಡ, ಆದಿ ಕರ್ನಾಟಕ ಆದಿ ಆಂದ್ರ ಎಂದು ಬರೆಯಿಸದೆ ನಿಮ್ಮ ಮೂಲ ಜಾತಿ ಹೆಸರನ್ನ ನಮೂದಿಸಿ ಎಂದು ಕರ್ನಾಟಕ ಮಾದಿಗ ದಂಡೋರದ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಶೇಖರಪ್ಪ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಗಮೋಹನ್ ದಾಸ್ ಆಯೋಗ ಸರಿಯಾದ ಸಮೀಕ್ಷೆ ಮಾಡಬೇಕು. ತಮ್ಮ ಸಮುದಾಯಕ್ಕೆ ನ್ಯಾಯಕೊಡಿಸಬೇಕು. ಮೇ1 ರಿಂದ ಮತ್ತೆ ಜಾತಿಜನಗಣತಿ ಆರಂಭವಾಗಲಿದೆ.
ಬಂಜಾರ, ಕೊರಮ ಮತ್ತು ಕೊರಚರಿಗೆ ಮೀಸಲಾತಿ ಹಂಚಿಕೊಂಡು ತಿನ್ನಲು ಇದು ಸಾದಾವಕಾಶವಾಗಿದೆ. ಒಂದು ವೇಳೆ ಸ್ಪರ್ಷ ಜಾತಿ ಕೇಳದಿದ್ದರೆ ಇದರ ವಿರುದ್ಧವೂ ಪ್ರಯಿಭಟನೆ ನಡೆಸಲಾಗುವುದು. ಈ ಬಗ್ಗೆ ಈ ಎಲ್ಲಾ ಜಾತಿಗಳು ಸಹಕರಿಸಿಕೊಂಡು ಹೋದರೆ ಅವಕಾಶವಿದೆ ಎಂದರು.
ನಾಗಮೋಹನ್ ದಾಸ್ ಆಯೋಗ ಎಕೆ, ಎಡಿ ಮತ್ತು ಆದಿ ಆಂದ್ರವನ್ನ ಕೈಬಿಡುವ ಸಾಧ್ಯತೆಯಿದೆ. ಹಾಗಾಗಿ ಸರಿಯಾಗಿ ತಮ್ಮ ಜಾತಿಯನ್ನಬರೆಸಲು ಸಾರ್ವಜನಿಕರಿಗೆ ಮನವಿ ಮಾಡಿದರು.
Shekharappa appeals