Suddilive || Shivamogga
ಮಂಜುನಾಥ ಮನೆಯವರಿಂದ ನಾರಾಯಣ ಬಲಿ ಕಾರ್ಯ-Narayana bali performed by Manjunatha's family
ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ಕುಟುಂಬಸ್ಥರಿಂದ ನಾರಾಯಣ ಬಲಿ ಕಾರ್ಯ ನಡೆದಿದೆ. ಅಕಾಲಿಕ ಮರಣದ ಹಿನ್ನಲೆಯಲ್ಲಿ ಸಂಪ್ರದಾಯದ ಹಿನ್ನಲೆಯಲ್ಲಿ ನಾರಾಯಣ ಬಲಿ ನಡೆದಿದೆ.
ನಾರಯಣ ಬಲಿ ಕಾರ್ಯವನ್ನ ಮಂಜುನಾಥ್ ಪುತ್ರ ಅಭಿ ಜೈ ನಡೆಸಿದ್ದಾರೆ. ಮೃತ ಮಂಜುನಾಥ್ ಗೆ ಸಧ್ಗತಿ ದೊರಕಲಿ ಎಂದು ನಡೆಯುತ್ತಿರುವ ಪೂಜ ಕಾರ್ಯ ನಡೆದಿದೆ. ಮಂಜುನಾಥ್ ಅವರಿಗೆ ಮೋಕ್ಷ ದೊರೆಯಲಿ ಎಂದು ನಾರಾಯಣ ಬಲಿ ಕಾರ್ಯ ನಡೆದಿದೆ.
ಶಿವಮೊಗ್ಗ ನಗರದ ತುಂಗಾ ತೀರದ ರೋಟರಿ ಚಿತಾಗಾರರದಲ್ಲಿ ಬಳಿ ಕಾರ್ಯ ನಡೆದಿದೆ. ಕಾರ್ಯಕ್ಕೆ ಕುಟುಂಬಸ್ಥರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಂಜುನಾಥ್ ಅವರನ್ನು ಕಳೆದುಕೊಂಡು ದುಖಃದಲ್ಲಿ ಇರುವ ಕುಟುಂಬ ಇವತ್ತಿಗೆ 7 ನೇ ದಿನದ ಕಾರ್ಯ ಮುಗಿದಿದೆ.
Narayana bali