MrJazsohanisharma

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ಕಟ್? ಬ್ರಾಹ್ಮಣ ಸಂಘ ಭೇಟಿ- Students Janivara cut

 suddilive || Shivamogga

 ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ಕಟ್? ಬ್ರಾಹ್ಮಣ ಸಂಘ ಭೇಟಿ-Students' Janivara cut at CET exam center? Brahmin Sangha visits

Janivara, cut

ನಿನ್ನೆ ಆದಿ ಚುಂಚನಗಿರಿ ಶಾಲೆಯಲ್ಲಿ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೈಗೆ ಕಟ್ಟಿಕೊಂಡಿರುವ ಕಾಶಿ ದಾರ, ಜನಿವಾರ ತೆಗೆಸಿದ ಬೆನ್ನಲ್ಲೇ ಬ್ರಾಹ್ಮಣ ಮಹಾಸಭಾದ ನೂತನ ಜಿಲ್ಲಾ ಪ್ರತಿನಿಧಿ ರಘುರಾಮ್ ಮತ್ತು ಮಾಜಿ ಪ್ರಸನ್ನ ಕುಮಾರ್, ದತ್ತಾತ್ರಿ ಭೇಟಿ ನಿಡಿದರು. 

ನಿನ್ನೆ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಜನಿವಾರವನ್ನ ತೆಗೆಯುವಂತೆ ಅಲ್ಲಿನ ಸೆಕ್ಯೂರಿಟಿ ತಿಳಿಸಿದ ಬೆನ್ನಲ್ಲೆ ಇಬ್ಬರು ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ. ಇಬ್ವರು ಏರು ಧ್ವನಿಯಲ್ಲಿ ಮಾತನಾಡಿದ ಪರಿಣಾಮ ಸೆಕ್ಯೂರಿಟಿ ತಣ್ಣಗಾಗಿದ್ದಾರೆ. 


ಓರ್ವ ವಿದ್ಯಾರ್ಥಿ ಜನಿವಾರ ತೆಗೆಯಲ್ಲ ಏನು ಮಾಡಿಕೊಳ್ತೀರ ಮಾಡಿಕೊಳ್ಳಿ ಎಂದು  ಪರೀಕ್ಷ ಕೇಂದ್ರದ ಒಳಗೆ ಹೋದರೆ ಮತ್ತೋರ್ವನ ವಿದ್ಯಾರ್ಥಿಯ ಜನಿವಾರ ಕಟ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಆತ ತನ್ನ ಪೋಷಕರಿಗೆ ತಿಳಿಸಿದ್ದಾನೆ. 

ಪೋಷಕರು ಬ್ರಾಹ್ಮಣ ಸಂಘಕ್ಕೆ ತಿಳಿಸಿದ ಹಿನ್ನಲೆಯಲ್ಲಿ ಇಂದು ಬ್ರಾಹ್ಮಣ ಸಮಾಜದ ನೂತನ ಜಿಲ್ಲಾ ಪ್ರತಿನಿಧಿ ರಘುರಾಮ್ ಮತ್ತು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಭೇಟಿನೀಡಿದ್ದಾರೆ. ಪರಿಶೀಲಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸುವುದಾಗಿ ಸಂಘಟನೆ ತಿಳಿಸಿದೆ. 

 Students' Janivara cut

Girl in a jacket

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close