SUDDILIVE || SHIVAMOGGA
ಮಂಜುನಾಥ ಯಾನೆ ಚಳಿ ಮಂಜನ ಕಾಲಿಗೆ ಗುಂಡೇಟು-Manjunatha alias Chali Manjana was shot in the leg
ಮಂಜುನಾಥ ಅಲಿಯಾಸ್ ಚಳಿ ಮಂಜ ಎಂಬುವನ ಕಾಲಿಗೆ ಗುಂಡೇಟು ತಗುಲಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದಾಗ ಮಂಜುವಿನ ಕಾಲಿಗೆ ಗುಂಡು ತಗುಲಿದೆ.
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ.9 ರಂದು ಬೆಳಿಗ್ಗೆ ವಾಕಿಂಗ್ ಗೆ ತೆರಳಿದ್ದ ಪ್ರಕರಣದಲ್ಲಿ ಹೇಮಣ್ಣ ಎಂಬ ವ್ಯಕ್ತಿಯನ್ನ ಮಚ್ಚು ಮತ್ತು ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳೆಂದು ಗುರುತಿಸಲಾಗಿತ್ತು.
ತಂಜೀಮ್ ಅಲಿಯಾಸ್ ತನು, ಚಳಿ ಮಂಜರಿಬ್ಬರು ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಮಂಜುನಾಥ್ ಯಾನೆ ಚಳಿ ಮಂಜ ಅವರನ್ನ ಬಂಧಿಸಲು ಹೋದಾಗ ಮಂಜುನಾಥ್ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಆತನ ಕಾಲಿಗೆ ಪಿಐ ಲಕ್ಷ್ಮೀಪತಿ ಗುಂಡು ಹಾರಿಸಿ ರಕ್ಷಿಸಿದ್ದಾರೆ. ಪ್ರಕರಣ ಹೊಳಲೂರಿನ ಗುಡ್ಡದ ಬಳಿಯೊಂದರಲ್ಲಿ ಪ್ರಕರಣ ನಡೆದಿತ್ತು.
ಈ ಘಟನೆಯಲ್ಲಿ ಹೊಳೆಹೊನ್ನೂರು ಪಿಸಿ ಪ್ರಕಾಶ್ ಗೂ ಗಾಯಗಳಾಗಿದ್ದು ಮಂಜುನನ್ನ ಬಂಧಿಸಲು ಹೋದಾಗ ಮಂಜು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಆತನ ಕಾಲಿಗೆ ಗುಂಡೇಟು ತಗುಲಿದೆ. ಪ್ರಕರಣದ ಹಿಂದೆ ಯಾರು ಯಾರು ಇದ್ದಾರೆ, ಅವರ ಹುಡುಕಾಟದಲ್ಲಿ ಪೊಲೀಸ್ ಇಲಾಖೆ ಇಳಿದಿದೆ.
Chali Manjana was shot in the leg