SUDDILIVE || BHADRAVATHI
ಬಕ್ರಿದ್ ಹಬ್ಬಕ್ಕೆ ಗೋಹತ್ಯೆಯಾಗದಂತೆ ನೋಡಿಕೊಳ್ಳುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಮನವಿ-Hindu Jagaran Vedike appeals to ensure that cows are not slaughtered for Bakrid festival
ಜೂ.7 ರಂದು ಬಕ್ರೀದ್ ಹಬ್ಬ ನಡೆಯಲಿದ್ದು ಬಕ್ರೀಸ್ ಹಬ್ಬಕ್ಕೆ ಗೋಹತ್ಯೆಯಾಗದಂತೆ ನೋಡಿಕೊಳ್ಳುವಂತೆ ಆಗ್ರಹಿಸಿ ಇಂದು ಹಿಂದೂ ಜಾಗರಣ ವೇದಿಕೆ ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಅವರಿಗೆ ಮನವಿ ಸಲ್ಲಿಸಿದೆ.
ಈಗಾಗಲೇ ದೊಣಬಘಟ್ಟ, ತಿಪ್ಲಾಪುರ, ತಿಪ್ಲಾಪುರ ಕ್ಯಾಂಪ್ ಹರಳಹಳ್ಳಿ ವೀರಪುರ, ಸಿದ್ದನಮಟ್ಟಿ, ಗುಡ್ಡದ ನೆರಳಿಕೆರೆ ಗೌಡ್ರಳ್ಳಿ ಹೊಳೆ ನೆರಳಿಕೆರೆ, ಕಾಗೆ ಕೊಡು ಮಗ್ಗಿ ಕೂಳಿಗೆರೆ, ಬೆಳ್ಳಿಕೆರೆ ಮೊದಲಾದ ಮುಸ್ಲಿಂ ಬಾಹುಳ್ಯ ಉಳ್ಳ್ಳ ಭಾಗಗಳಲ್ಲಿ ಗೋ ಹತ್ಯೆ ಹೆಚ್ಚಾಗಿದ್ದು ಈ ಬಾರಿಯೂ ನೂರಾರು ಸಂಖ್ಯೆಗಳಲ್ಲಿ ಗೋವುಗಳನ್ನು ತಂದು ಕಟ್ಟಿರುತ್ತಾರೆ.
ಹಾಗಾಗಿ ತಾವುಗಳು ಗೋವುಗಳನ್ನು ಕಟ್ಟಿರುವ ಮನೆಗಳಲ್ಲಿ ಪರವಾನಿಗೆ ಬಗ್ಗೆ ಪರಿಶೀಲಿಸಬೇಕಾಗಿ ಸಂಘಟನೆ ಒತ್ತಾಯಿಸಿದೆ. ಒಂದು ವೇಳೆ ಪರವಾನಿಗೆ ಇಲ್ಲದಲ್ಲಿ ಗೋಗುಗಳನ್ನು ರಕ್ಷಿಸಿ, ಪರವಾನಿಗೆ ಇಲ್ಲದೆ ಕಟ್ಟಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸಂಘಟನೆ ಈ ಸಂದರ್ಭದಲ್ಲಿ ಒತ್ತಾಯಿಸಿದೆ.
ಈ ವರ್ಷ ಯಾವುದೇ ಗೋ ಹತ್ಯೆ ನಡೆಯದಂತೆ ತಾವುಗಳು ಬಿಗಿ ಕಾನೂನು ಕ್ರಮ ಕೈಗೊಳ್ಳಬೇಕು. ಮತ್ತು ಹಲವು ರಸ್ತೆಗಳಲ್ಲಿ ಚೆಕ್ ಪೋಸ್ಟ್ಗಳು ನಿರ್ಮಿಸಿದ್ದರು ಸಹ ಅಕ್ರಮ ಗೋಸಾಗಣಿಕೆ ಹೆಚ್ಚಾಗಿದ್ದು ಇವುಗಳ ವಿರುದ್ಧವು ಸಹ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸಿದೆ ಮನವಿಯನ್ನು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ದೇವರಾಜ್ ಅರಳಹಳ್ಳಿ ಅವರ ನೇತೃತ್ವದಲ್ಲಿ ಸಲ್ಲಿಸಲಾಗಿತ್ತು
Hindu Jagaran Vedike appeals