ಕಾನೂನು ಬಾಹಿರ ಚಟುವಟಿಕೆಗಳಿಗೆ ಹಿಂದುತ್ವ ಬಳಕೆ - ದಿನೇಶ್ ಗುಂಡೂರಾವ್ ಕಳವಳ-Dinesh Gundu Rao concerned

 SUDDILIVE|| SHIVAMOGGA

ಕಾನೂನು ಬಾಹಿರ ಚಟುವಟಿಕೆಗಳಿಗೆ ಹಿಂದುತ್ವ ಬಳಕೆ - ದಿನೇಶ್ ಗುಂಡೂರಾವ್ ಕಳವಳ-Hindutva being used for illegal activities - Dinesh Gundu Rao concerned

Gundurao, concerned


ಮರಳು ಮಾಫೀಯಾ ಸೇರಿದಂತೆ ಕಾನೂನು  ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದವರು ಹಿಂದುತ್ವವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಚಿವ ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು. .

ಶಿವಮೊಗ್ಗದ ಐಬಿಯಲ್ಲಿ ಮಾತನಾಡಿದ ಅವರು ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ನಡೆಯುತ್ತಿದ್ದು ಅದಕ್ಕೆ ಪ್ರತಿಕ್ರಿಯಿಸಿದ ಅವರು ಹಿಂದುತ್ವದ ಹೆಸರಿನಲ್ಲಿ ಎಲ್ಲಾ ಕೊಲೆ ಸುಲಿಗೆಗಳು ನಡೆಯುತ್ತಿದೆ. ನಿನ್ನೆ ನಡೆದ ಕೊಲೆಯ ಆರೋಪಿಗಳನ್ನ ಬಂಧಿಸಲಾಗಿದೆ. ಪ್ರತೀಕಾರದ ಕೊಲೆ ನಡದರೆ ಜನ ಭೀತಿಗೊಳಗಾಗುತ್ತಾರೆ ಎಂದರು. 

ಸಂಘಪರಿವಾರ ಮತ್ತು ಬಿಜೆಪಿಯವರು ಶವದ ಮೇಲೆ ರಾಜಕಾರಣ ಮಾಡುತ್ತಾ ಬಂದಿದ್ದಾರೆ.  ಕರಾವಳಿಯಲ್ಲಿ ಕೆಟ್ಟ ವಾತಾವರಣ ನಿರ್ಮಾಣವಾಗಲು ಬಿಜೆಪಿಯವೇ ಕಾರಣ. ವಿಷ ತುಂಬಿದ ಮನಸ್ಸುಗಳು ಅವರದ್ದು, ಕೊಳಕು ತುಂಬಿದ ಮನಸ್ಸುಗಳು ಹೇಳಿಕೆ ನೀಡುತ್ತಾರೆ ಎಂದು ಆರೋಪಿಸಿದರು. 


ಎಂಎಲ್ ಸಿ ರವಿಕುಮಾರ್ ತಪ್ಪಾಗಿ ಹೇಳಿಕೆ ನೀಡಿ ನಂತರ ಕ್ಷಮೆ ಕೇಳಿದ್ದಾರೆ.ಅದು ಸಹ ಅವರ ಮನಸ್ಸಿನ ಮಾತುಗಳು ಎಂದ ಅವರು ಸುಹಾಸ್ ಶೆಟ್ಟಿ ಒಬ್ಬ ರೌಡಿ ಶೀಟರ್ ಆಗಿದ್ದ ಎರಡು ಕೊಲೆ ಆರೋಪದಲ್ಲಿ ಭಾಗಿಯಾಗಿದ್ದ. ಅಂತಹವನ ಕೊಲೆಯಾಗಿದೆ. ಇದಕ್ಕೆ ಪ್ರತೀಕಾರ ಎಂಬಂತೆ ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಕೊಲೆಯಾಗಿದೆ ಮತ್ತೋರ್ವನಿಗೆ ಗಾಯಗಳಾಗಿವೆ. ಇಂತಹ ಪ್ರತೀಕಾರ ನಡೆದರೆ ಜನ ಬದುಕುವುದುವಹೇಗೆ ಎಂದರು.  

ಪ್ರತೀಕಾರದ ಕೊಲೆ ತಡೆಯಲು ಆಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಕೋಮು ವಾದವನ್ನ  ಸಾಮಾಜಿಕವಾಗಿ ಬೇರೆ ಬೇರೆಯಾಗಿ ನೋಡಬೇಕಿದೆ. ಅಬ್ದುಲ್ ರೆಹಮಾನ್ ಕೊಲೆಗೆ ಪರಿಹಾರದ ಬಗ್ಗೆ ನಂತರ ವಿಚಾರಿಸಲಾಗುವುದು. ಇಂದು ಹತ್ಯೆಯಾದ ಸಂತ್ರಸ್ತನ ಅಂತ್ಯಕ್ರಿಯೆ ನಡೆಯಲಿದೆ. ಸುಹಾಸ್ ಶೆಟ್ಟಿ ಹತ್ಯೆಯ ನಂತರ ಪ್ರಚೋದನಾತ್ಮಕ ಭಾಷಣ ಮಾಡಲಾಗುತ್ತಿದೆ. ಅವರ ವಿರುದ್ಧ ದೂರು ದಾಖಲಾಗಿದೆ. ಇಂತಹ ಪ್ರಚೋದನಾಕಾರಿ ಭಾಷಣಗಳನ್ನ ಮಾಡುವುದು ಕಡಿಮೆಯಾಗಲು ಜನರ ಮನಸ್ಥಿತಿ ಬದಲಾಗಬೇಕು ಎಂದು ಹತಾಶೆ ವ್ಯಕ್ತಪಡಿಸಿದರು. 

ಮಂಗಳೂರಿನಲ್ಲಿ ಇಂತಹ ಪ್ರತೀಕಾರದ ಹತ್ಯೆ ಮುಂದು ವರೆದರೆ ಯಾರು ಬಂದು ಬಂಡವಾಳ ಹಾಕುತ್ತಾರೆ ಎಂದು ಪ್ರಶ್ನಿಸಿದ ಅವರು. ಹಿಂದುತ್ವದ ಹೆಸರಿನಲ್ಲಿ ಎಲ್ಲವೂ ನಡೆಯುತ್ತದೆ. ಧರ್ಮದ ಬೆಂಬಲವಿದೆ ಎಂಬ ಕಾರಣಕ್ಕೆ ಎಲ್ಲವೂ ನಡೆದರೆ ಹೇಗೆ?  ಮಂಗಳೂರಿನಲ್ಲಿ ಹತ್ತೆಯಾದವನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದು. ಇದಕ್ಕೆ ಮತ್ತೊಂದು ಹತ್ಯೆ ನಡೆಯಬೇಕಿದೆ ಎಂಬ ಆಡಿಯೋ ಹೊರಬೀಳುಯ್ತಿರುವುದಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ ಎಂದು ನುಣಚಿಕೊಂಡರು. 

ಕೋವಿಡ್ ಎಚ್ಚರಿಕೆ

ಕೋವಿಡ್ ಈಗ ಕಾಣಿಸಿಕೊಂಡ ವೈರಾಣುವಿನಿಂದ ತೀವ್ರತರನಾದ ಸಾವು ನೋವುಗಳಾಗುವುದಿಲ್ಲ. ಈ ರೂಪಾಂತರಿ ತಳಿ ಪರಿಣಾಮ ಬೀರುವುದಿಲ್ಲ. ವಯಸ್ಸಾದವರು, ಮಕ್ಕಳು ಮತ್ತು ಗರ್ಭಿಣಿಯರು ಮಾಸ್ಕ್ ಧರಿಸಲು ಹೇಳಿದ್ದೇವೆ. ಕೋವಿಡ್ ಕಾಣಿಸಿಕೊಂಡರೆ ಪರೀಕ್ಷೆ ನಡೆಸಬೇಕು. ಮಕ್ಕಳಿಗೆ ಜ್ವರ ನೆಗಡಿ ಕೆಮ್ಮಿದ್ದರೆ ಶಾಲೆಗೆ ಕಳುಹಿಸಬೇಡಿ ಎಂದಿರುವುದಾಗಿ ತಿಳಿಸಿದರು


ಕಲ್ಯಾಣ ಕರ್ನಾಟಕ ಮತ್ತು ಚಾಮರಾಜ ನಗರ ಸೇರಿದಂತೆ 14 ಕಡೆ ಮೆಡಕಲ್ ಆಸ್ಪತ್ರೆಯಿದೆ. ಅಲ್ಲಿ ನಮ್ಮ ಜಿಲ್ಲಾ ಆಸ್ಪತ್ರೆ ಆರಂಭಿಸುವ ಚಿಂತನೆ ನಡೆದಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 3.5 ಲಕ್ಷ ರೂ. ಮೆಡಿಸಿನ್ ದೊರೆತಿದೆ ಎಂಬ ಮಾಧ್ಯಮ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವರಿಗೆ ಈ ಪ್ರಶ್ನೆ ಕೇಳುವಂತೆ ಕೋರಿದರು. 

ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಸಿನ್ ಸಿಗುವಂತೆ ನಾವು ಮಾಡುತ್ತೇವೆ

ಮೆಡಿಕಲ್ ಕಾಲೇಜಿನಲ್ಲಿ ಕೀಮೋ ತೆರಪಿ ಆರಂಭಿಸುವುದಾಗಿ ಸಿಎಂ ಹೇಳಿದ್ದಾರೆ.  ಜನೌಷಧಿ ಕೇಂದ್ರ 1400 ಕೇಂದ್ರವಿದೆ ಇದರಲ್ಲಿ 180 ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿದೆ. ನಮ್ಮಲ್ಲಿ ಮೆಡಿಸಿನ್ ಉಚಿತವಾಗಿ ಸಿಗಲಿದ್ದು ಅದನ್ನ ಹಣಕ್ಕೆ ಖರೀದಿಸದಂತೆ ಜನೌಷಧವನ್ನ ತೆರವುಗೊಳಿಸಲಾಗುತ್ತಿದೆ. ನಮ್ಮಲ್ಲಿ ಮೆಡಿಸಿನ್ ಕೊಡುತ್ತೇವೆ. ಎಸೆನ್ಸಿಯಲ್ ಮೆಡಿಸಿನ್ ಮತ್ತು ರಿಕ್ವೈಡ್ ಮೆಡಿಸಿನ್ ಕೊಡುತ್ತೇವೆ. ಔಷಧಿ ಬೇಕಾದರೆ ಸಾರ್ವಜನಿಕರು ಹೊರಗಡೆಯಿಂದ ಖರೀದಿಸಬಹುದು. ನಮ್ಮ ಆಧ್ಯತೆ ಉಚಿತವಾಗಿ ನಡೆಯಬೇಕು ಎಂಬುದು ಅಷ್ಟೆ. ಮೆಡಿಸಿನ್ ಆಸ್ಪತ್ರೆಯಲ್ಲಿ ಸಿಗುವಂತೆ  ನಾವು ಮಾಡುತ್ತೇವೆ ಎಂದು ಸಚಿವರು ತಿಳಿಸಿದರು. 

Dinesh Gundu Rao concerned

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close