SUDDILIVE || SHIVAMOGGA
ಕಮಲ್ ಹಾಸನ್ ಅವರ ನಿರ್ಲಜ್ಜ ಹೇಳಿಕೆ ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆಯಾಗಿದೆ-ಶಾಸಕ ಚೆನ್ನಬಸಪ್ಪ-Kamal Haasan's shameless statement has hurt the self-respect of Kannadigas - MLA Chennabasappa
ತಮಿಳಿನಿಂದ ಕನ್ನಡ ಹುಟ್ಟಿದೆ ಎಂದ ನಟ ಕಮಲ ಹಾಸನ್ ಹೇಳಿಕೆಯನ್ನ ಶಾಸಕ ಚೆನ್ನಬಸಪ್ಪ ಖಂಡಿಸಿದ್ದಾರೆ.
ಕನ್ನಡವು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀಮಂತ, ಶ್ರೇಷ್ಠ ಭಾಷೆ. ಶತಮಾನಗಳ ಹಿಂದೆಯೇ ರೂಪುಗೊಂಡ ಈ ಭಾಷೆ, ಭಾರತೀಯ ಭಾಷೆಗಳ ಪೈಕಿ ಕನ್ನಡಕ್ಕೆ ಪ್ರಾಚೀನ ಲಿಪಿ ಹಾಗೂ ಸಾಹಿತ್ಯ ಪರಂಪರೆಗೆ ಸಾಕ್ಷಿಯಾಗಿದೆ.
ಆದರೆ, “ಕನ್ನಡ ತಮಿಳಿನಿಂದ ಹುಟ್ಟಿದ ಭಾಷೆ" ಎಂಬ ನಟ ಕಮಲ್ ಹಾಸನ್ ಅವರ ಆಧಾರವಿಲ್ಲದ ಹೇಳಿಕೆ, ನಿರರ್ಥಕ ಮತ್ತು ಸಾಂಸ್ಕೃತಿಕ ದುರಭಿಪ್ರಾಯವನ್ನು ಎತ್ತಿ ತೋರುತ್ತಿದೆ. ಇದರ ಜೊತೆಗೆ ಸಾವಿರಾರು ವರ್ಷಗಳಿಂದ ತನ್ನ ಶ್ರೀಮಂತ ಭಾಷಾ ಪರಂಪರೆಯನ್ನು ಉಳಿಸಿಕೊಂಡಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವೂ ಲಭಿಸಿದ್ದು, ಇದರ ಸ್ವಾಭಿಮಾನ ಮತ್ತು ಗರ್ವಕ್ಕೆ ಅಪಮಾನವಾಗಿದೆ. ಆರೂವರೆ ಕೋಟಿ ಕನ್ನಡಿಗರ ಭಾವನೆಗೆ ಧಕ್ಕೆ ಉಂಟುಮಾಡಿದೆ. ಇಂತಹ ಬುದ್ಧಿಜೀವಿಗಳಿಂದ ನಿರ್ಧಾರಿತ ಅಸೂಕ್ಷ್ಮತೆ ಭರತಖಂಡದ ಭಾಷಾ ವೈವಿಧ್ಯತೆ ಮತ್ತು ಸಾಮರಸ್ಯಕ್ಕೆ ಹಾನಿಕಾರಕವಾಗಿದೆ ಎಂದು ಆರೋಪಿಸಿದ್ದಾರೆ.
ಹೆಸರುಮಾತ್ರದ “ಸೋ ಕಾಲ್ಡ್ ಬುದ್ಧಿಜೀವಿ"ಗಳಾದಂತೆ ಮಾತನಾಡಿದ ಹಾಸನ್ ಅವರು, ತಮ್ಮ ಮಾತುಗಳಿಂದ ಸಮಾಜದಲ್ಲಿ ಭಾಷೆಗಳ ಮಧ್ಯೆ ಒಡಕು ಉಂಟುಮಾಡಬಾರದು. ಕನ್ನಡಿಗರ ಮೂಲಕವೇ ಸಿನಿಮಾ ನಟನಾಗಿ ಎತ್ತರಕ್ಕೆ ಬೆಳೆದು, ಇಂದು ರಾಷ್ಟ್ರಮಟ್ಟದಲ್ಲಿ ನಟನಾಗಿ ಬೆಳೆದಿದ್ದೇನೆ ಎಂದು ತಿಳಿದು ತಮ್ಮ ಹಿಡಿತವಿಲ್ಲದ ಮಾತುಗಳ ಮೂಲಕ ಅಖಂಡ ಭಾರತದ ಜನತೆ ನಡುವೆ ಭಾಷಾ ಭಿನ್ನಾಭಿಪ್ರಾಯವನ್ನು ಉಂಟುಮಾಡಬಾರದು. ಹೀಗಾಗಿ, ಕಮಲ್ ಹಾಸನ್ ಅವರು ತಕ್ಷಣವೇ ತಮ್ಮ ಹೇಳಿಕೆಗೆ ಕ್ಷಮೆ ಕೋರಿ, ತಪ್ಪನ್ನು ಸರಿಪಡಿಸಿಕೊಳ್ಳಬೇಕು.
ಇದೇ ರೀತಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಬೇಕು. ಭಾಷಾ ಗೌರವ ಮತ್ತು ರಾಷ್ಟ್ರದ ಏಕತೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ನಮ್ಮಭಾಷೆ, ನಮ್ಮನೆಲೆ, ನಮ್ಮ ಗೌರವ – ಈ ಮೂರನ್ನು ಉಳಿಸಿಕೊಳ್ಳಲು ನಾವು ಸದಾ ಬದ್ಧರಾಗಿದ್ದೇವೆ. ಯಾರೇ ಆಗಲಿ, ಕನ್ನಡದ ಅಸ್ತಿತ್ವಕ್ಕೆ ಧಕ್ಕೆಯಾಗುವ ಯಾವ ಮಾತೂ ಕನ್ನಡಿಗರು ಸಹಿಸುವುದಿಲ್ಲ ಎಂಬುದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
Kamal Haasan's shameless statement