ತಿಗಳರು ವನ್ನಿಕುಲಂ ಕ್ಷತ್ರಿಯರನ್ನ ಹೈಜಾಕ್ ಮಾಡಿದ್ದಾರೆ-ಶ್ರೀನಿವಾಸ್ ಸಾಗರ್ ಆರೋಪ-Thigals hijacked Vannikulam Kshatriyas

 SUDDILIVE || SHIVAMOGGA

ತಿಗಳರು ವನ್ನಿಕುಲಂ ಕ್ಷತ್ರಿಯರನ್ನ ಹೈಜಾಕ್ ಮಾಡಿದ್ದಾರೆ-ಶ್ರೀನಿವಾಸ್ ಸಾಗರ್ ಆರೋಪ-Thigals hijacked Vannikulam Kshatriyas - Srinivas Sagar alleges

Vannikulam, hijacked

25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ರಾಜ್ಯದಲ್ಲಿರುವ ವನ್ನಿಕುಲಂ ಕ್ಷತ್ರೀಯ ಸಮಾಜ ಶಿವಮೊಗ್ಗ ಜಿಲ್ಲೆಯ 1½ ಲಕ್ಷ ಜನ ಸಂಖ್ಯೆಯಿದೆ. ಆದರೆ ನಮ್ಮವರನ್ನ ತಿಗಳರ ಜಾತಿಗೆ ಸೇರಿಸಲಾಗಿದೆ ಎಂದು ರಾಜ್ಯ ವನ್ನಿಕುಲಂ ಕ್ಷತ್ರಿಯಾ ಸಮಾಜದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಸಾಗರ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗಾದ ಅನ್ಯಾಯವನ್ನ ಸರ್ಕಾರ ಸರಿಪಡಿಸಬೇಕು. ವನ್ನಿಕುಲಂ ಸರ್ ನೇಮ್ ಗೌಂಡರ್ ಅಂತ ಇದೆ.  3ಎಯಲ್ಲಿರುವ ನಮಗೆ 2 ಎ ಮಾಡಿಕೊಡಬೇಕು. 2 ಎಗೆ ಸೇರಿಸಿದರೆ 15% ಮೀಸಲಾತಿ ದೊರೆಯಲಿದೆ ಎಂದು ಹೇಳಿದರು.  

ಸಂಘಟನೆಯ ಜನರಲ್ ಸೆಕ್ರೆಟರಿ ಹರಿನಾತ್  ಮಾತನಾಡಿ ನಾವು ವನ್ನಿಕುಲ ಕ್ಷತ್ರಿಯರು, ನಮಗೆ ತಿಗಳ ಜನಾಂಗದವರಿಂದ ಅನ್ಯಾಯವಾಗಿದೆ. ತಿಗಳರಿಗೂ ನಮಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ನಮ್ಮ ಅಚಾರ ವಿಚಾರವೇ ಬೇರೆ ಅವರ ಆಚಾರ ವಿಚಾರಗಳೇ ಬೇರೆ. ಹೀಗಿದ್ದರೂ ಸಹ ರಾಜ್ಯ ಹಿಂದುಳಿದ ವರ್ಗಗಳ ಜಾತಿಯ ಪಟ್ಟಿಯ ಕ್ರ.ಸಂ.10(ಎ) ರಲ್ಲಿ ತಿಗಳರನ್ನು ಪ್ರಮುಖ ಜಾತಿಯನ್ನಾಗಿ ಮಾಡಿ ನಮ್ಮ ವನ್ನಿಕುಲ ಕ್ಷತ್ರಿಯ ಮತ್ತು ಇದರ ಉಪಜಾತಿಗಳಾದ ವನ್ನಿಯ, ನನ್ನಿಯರ್, ವನ್ನಿಯಗೌಂಡರ್, ಗೌಂಡರ್, ಖಂಡರ್, ಪಡೆಯಾಚ್ಚಿ, ಅಗ್ನಿಕುಲ ಕ್ಷತ್ರಿಯ, ಶಂಭುಕುಲ ಕ್ಷತ್ರಿಯ ಮತ್ತು ಪಳ್ಳಿ ಜಾತಿಗಳನ್ನು ತಿಗಳರ ಅಡಿಯಲ್ಲಿ ತಂದು ಅನ್ಯಾಯ ಮಾಡಿದೆ ಎಂದು ದೂರಿದರು. 

ತಿಗಳರು ನಮ್ಮ ಜಾತಿಯವರಲ್ಲ. ಹಲವಾರು ವರ್ಷಗಳಿಂದ ನಮಗೆ ಸಲ್ಲಬೇಕಾದ ಎಲ್ಲಾ ಸವಲತ್ತುಗಳನ್ನು ಅಂದರೆ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಗ ಮತ್ತು ರಾಜಕೀಯವಾಗಿ ಎಲ್ಲವನ್ನು ಅವರೇ ಕಸಿದುಕೊಂಡು ಅನ್ಯಾಯವನ್ನು ಮಾಡಿರುತ್ತಾರೆ.

ಈ ವಿಚಾರವಾಗಿ ನಾವು ನಮ್ಮ ಸಂಘದವತಿಯಿಂದ ಸುಮಾರು ವರ್ಷಗಳಿಂದ ಸಂಶೋಧನೆ ಮಾಡಿ ಅನೇಕ ಪುರಾತನ ದಾಖಲೆಗಳನ್ನು ಸಂಗ್ರಹಿಸಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಯಪ್ರಕಾಶ್ ಹೆಗಡೆರವರಿಗೆ ಸಂಪೂರ್ಣ ದಾಖಲೆಗಳೊಂದಿಗೆ ಸಲ್ಲಿಸಿ ನಮ್ಮನ್ನು ತಿಗಳರಿಂದ ಬೇರ್ಪಡಿಸಿ ನಮ್ಮ ವನ್ನಿಕುಲ ಕ್ಷತ್ರಿಯರನ್ನು ಪ್ರಮುಖ ಜಾತಿಯನ್ನಾಗಿ ಮಾಡಿ ಹಾಗೂ ಇದರ ಉಪಜಾತಿಗಳನ್ನು ವನ್ನಿಕುಲ ಕ್ಷತ್ರಿಯರಡಿಯಲ್ಲಿ ತಂದು ನಮಗಾಗಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಮನವಿ ಮಾಡಿದ್ದೆವು. 2021 ರಿಂದ ಹಿಂದುಳಿದ ವರ್ಗಗಳ ಆಯೋಗಕ್ಕೆ ಅರ್ಜಿಗಳನ್ನು ಹಾಗೂ ತಕರಾರುಗಳನ್ನು ಸಲ್ಲಿಸಿ ಹೋರಾಟ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು. 

ಈ ವಿಚಾರವಾಗಿ ಮಾಜಿ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆರವರಿಗೆ ಚೆನ್ನಾಗಿ ಗೊತ್ತಿದೆ. ಹೀಗಿದ್ದರೂ ಸಹ ಇನ್ನೂ ಹಲವು ಹೊಸ ಗೊಂದಲಗಳನ್ನು ಸೃಷ್ಟಿಮಾಡಿ ಜಾತಿಗಣತಿ ಪಟ್ಟಿಯಲ್ಲಿ ತಿಗಳರನ್ನು ಈಗ ವಗ್ನಿ ಕುಲಕ್ಷತ್ರಿಯ ಅಂತ ಹೊಸದಾಗಿ ಬಿಂಬಿಸಿದ್ದಾರೆ. ಇದು ಸರಿಯಲ್ಲ.

ವನ್ನಿಯರ್ ಅನ್ನೋದರ ಸಂಸ್ಕೃತಪದವೇ ವಗ್ನಿ ಇದು ನಮ್ಮ ಜನಾಂಗಕ್ಕೆ ಸೇರಿದ ಸಂಸ್ಕೃತ ಪದ ಇದನ್ನು ಈಗ ತಿಗಳ ಜನಾಂಗಕ್ಕೆ ಸೇರಿದವರು ತಮ್ಮ ರಾಜಕೀಯ ಬಲದಿಂದ ಜಯಪ್ರಕಾಶ್ ಹೆಗಡೆರವರ ಮೇಲೆ ಒತ್ತಡ ಹೇರಿ ಮಾಡಿರುವಂತ ಕುತಂತ್ರ. ಈ ರೀತಿಯಾದ ವನ್ನಿ ಕುಲಕ್ಷತ್ರಿಯ ಅನ್ನೋ ಜಾತಿ ಈ ಹಿಂದೆಯೂ ಇಲ್ಲಾ ಮುಂದೆನೂ ಬರೋಲ್ಲ. ಅದಕ್ಕೆ ಹಕ್ಕುದಾರರು ನಾವು ಮತ್ತು ನಮ್ಮ ವನ್ನಿಕುಲ ಕ್ಷತ್ರಿಯ ಬಂದುಗಳು ಮಾತ್ರ. ಒಂದು ವೇಳೆ ಈ ರೀತಿ ತಿಗಳರನ್ನು ನಮ್ಮ ಜಾತಿ ಜನಾಂಗಕ್ಕೆ ಸೇರಿಸಿ ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಧಕ್ಕೆ ತರುವುದಾದರೇ ನಮ್ಮ ವನ್ನಿಕುಲ ಕ್ಷತ್ರಿಯ ಜನಾಂಗ ಕರ್ನಾಟಕಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದರು. 

Thigals hijacked Vannikulam Kshatriyas

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close