SUDDILIVE || SHIVAMOGGA
ಮೋದಿಗೆ ನಮ್ಮದು ಸಂಪೂರ್ಣ ಬೆಂಬಲ, ಪಾಕ್ ಗೆ ನುಗ್ಗಿ ಹೊಡೆಯಿರಿ-ಬೇಳೂರು-We fully support Modi, invade Pakistan and strike-Belur
ಸುಹಾಸ್ ಶೆಟ್ಟಿನ ಬಿಜೆಪಿಗರು ಹೋರಾಟಗಾರರನಿಗೆ ಹೋಲಿಸಬೇಡಿ, ಆತನ ಕೊಲೆಯಾಗಿದೆ ಆರೋಪಿಗಳು ಯಾರಾದರೆ ಏನು ಹಿಂದೂ ಆದರೆ ಏನು? ಮುಸ್ಲೀಂ ಆದರೆ ಏನು? ಒದ್ದು ಒಳಗೆ ಹಾಕಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರಿನಲ್ಲಿ ಮತ್ತೆ ಕೋಮು ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆದಿದೆ. ಆತನ ಕೊಲೆ ನಡೆದಿರುವ ಹಿನ್ನಲೆಯಲ್ಲಿ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡುವಂತಾಗಲಿ ಆತ ಹಿಂದೂ ಆದರೆ ಏನೂ ಮುಸ್ಲೀಂ ಆದರೆ ಏನು ಎಂದರು.
ಸಂಸದರು ನೆಟ ವರ್ಕ್ ಸರಿ ಮಾಡಿಕೊಬೇಕು. 2 ಜಿ ನೆಟ್ ವರ್ಕ್ ಸಹ ಸರಿ ಬರೊಲ್ಲ. ಬೇರೆ ದೇಶಗಳು 10ಜಿಗೆ ಹೋಗಿವೆ. ನಮಗೆ ನೆಟ್ಟಗೆ 4 ಜಿ ಸರಿ ವರ್ತಾಯಿಲ್ಲ. ರೈಲ್ವೆ ಇಲಾಖೆ ಕಾಮಗಾರಿ ಸರಿ ಮಾಡಿಸಿ. ಸಾಗರದಲ್ಲಿ ಮಳೆ ಬಂದರೆ ನೀರು ನಿಲ್ಲುತ್ತದೆ. ನಮಗೂ ಬಿಡ್ತಾಯಿಲ್ಲ. 21 ನೇ ಶತಮಾನದಲ್ಲಿ ನಾವೆಲ್ಲ ಇದೀವಿ. ನೆಟವರ್ಕ್ ಇಲ್ಲ ಎಂದರೆ ಹೇಗೆ ಎಂದ ಶಾಸಕರು ಹೈವೆ ರಸ್ತೆಯೂ 12-13 ವರ್ಷದ ವರೆಗೆ ನಡೆದಿದೆ ನಾವು ಹೋದ ಮೇಲೆ ಹೈವೆಯಾಗುತ್ತದೆಯೋ ಗೊತ್ತಿಲ್ಲ ಸಂಸದರು ಸರಿಯಾಗಿ ಸಭೆ ಮಾಡಿ ಎಂದು ಸಲಹೆ ನೀಡಿದರು.
ಮೇ.09 ರಂದು ಶರಾವತಿ ಮುಳುಗಡೆ ಸಂತ್ರಸ್ತರ ಸಭೆ ನಡೆಸಿ ಹೀರೋ ಆಗಲು ಹೊರಟಿದ್ದಾರೆ. ಇವರಿಂದಲೇ ರೈತರು ವಿಷ ಕುಡಿಯುವ ಮಟ್ಟಕ್ಕೆ ಹೋಗಿದ್ದಾರೆ. ನಮ್ಮ ಸರ್ಕಾರ 9000 ಜನರಿಗೆ ಹಕ್ಕು ಪತ್ರ ನೀಡುತ್ತಿದೆ. 9000 ಸರ್ವೆ ಜೊತೆಗೆ ಉಳಿದವರ ಸರ್ವೆಯೂ ಬಹಳಷ್ಠಿದೆ ಅವರಿಗೂ ಹಕ್ಕುಕೊಡುವಂತಾಗಬೇಕು ಎಂದರು.
ಪಾಕಿಸ್ತಾನದ ಪ್ರಜೆಯನ್ನ ಹೊರದಬ್ಬಬೇಕು. ಕಾಂಗ್ರೆಸ್ ನವರು ಪಾಕ್ ಪರ ಎಂದು ಬಿಜೆಪಿ ಬಿಂಬಿಸುತ್ತಿದೆ. ಹಲೋ ಬಿಜೆಪಿಗರೆ ನಮ್ಮ ಇಂದಿರಾಗಾಂಧಿ ಇದ್ದಾಗಲೇ ಪಾಕ್ ಗೆ ತಕ್ಕಪಾಠ ಕಲಿಸಿದ್ದಾರೆ. ಯುದ್ಧದಲ್ಲಿ ಮೋದಿಜಿಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲವಿದೆ. ಪಾಕಿಸ್ತಾನಕ್ಕೆನುಗ್ಗಿ ಹೊಡೆಯಿರಿ. ಪಾಕಿಸ್ತಾನಕ್ಕೆ ಜೈ ಎಂದಿರುವ ರಾಖಿಸಾವಂತರನ್ನ ಭಾರತಕ್ಕೆ ಬಾರದಂತೆ ನೋಡಿಕೊಳ್ಳಿ ಎಂದರು.
ಸಂಸದರು ರಾಜ್ಯದಲ್ಲಿ ಪಾಕ್ ಪ್ರಜೆಯನ್ನ ಹೊರಹಾಕಿಲ್ಲ ಎಂದು ಹೇಳಿದ್ದಾರೆ. ಕೆಲವರು ಕೋರ್ಟ್ ಗೆ ಹೋದರೆ ನಾವೇನು ಮಾಡೋಣ ಎಂದು ತಿಳಿಸಿದರು.
We fully support Modi