SUDDILIVE || SHIVAMOGGA
ಕಾರ್ಖಾನೆ ಪುನಶ್ಚೇತನಕ್ಕೆ ಹೆಚ್ ಡಿಕೆ ಮತ್ತು ಪ್ರದಾನಿ ಮೋದಿಗೆ ಅಭಿನಂದಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷರು -JDS district president congratulates HDK and PM Modi for factory revival
ವಿಐಎಸ್ಎಲ್ ಕಾರ್ಖಾನೆ ಪುನರ್ಸ್ಥಾಪನೆಗೆ ಕೇಂದ್ರ ಸಚಿವ ಕುಮಾರ ಸ್ವಾಮಿ ಘೋಷಿಸಿರುವುದನ್ನ ಸ್ಥಳೀಯ ಜೆಡಿಎಸ್ ಸ್ವಾಗತಿಸಿದ್ದು. ಮೊದಲನೆಯ ಕಂತಾಗಿ 10 ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷಾತೀತವಾಗಿ ಪುನರ್ ಸ್ಥಾಪನೆಗೆ ಶ್ರಮಿಸಿದ್ದರು. ಅದನ್ನ ಕೇಂದ್ರ ಸಚಿವ ಕುಮಾರ ಸ್ವಾಮಿ ಮತ್ತು ಪ್ರಧಾನಿ ಮೋದಿಗೆ ಅಭಿನಂದಿಸುವೆ. ಬಿಎಸ್ ವೈ, ಸಂಸದ ರಾಘವೇಂದ್ರ, ಆದಿಚುಂಚನಗಿರಿ ಸ್ವಾಮೀಜಿಗಳ ಶ್ರಮವಿದೆ ಎಂದರು.
ಭದ್ರಾವತಿ ಮತ್ತು ಚಿಕ್ಕಜಾಜೂರಿಗೆ ರೈಲು ಹೊಸ ಸಂಪರ್ಕ ಸಾಧಿಸಲಾಗುತ್ತಿದೆ. ವಿಐಎಸ್ ಎಲ್ ಜೊತೆ ಹೆಚ್ ಎಂಟಿ ಸಹ ಪುನಶ್ಚೇತನವಾಗುತ್ತಿದೆ. ತುಂಗ ಆಯಿಲ್ ಮಿಲ್ ಮತ್ತು ಪಾಲಿಜೆ ನಡುವೆ ಜಟಪಟಿ ನಡೆಯುತ್ತಿತ್ತು. ಪಾಲಿಜೆ ಪರ ನ್ಯಾಯಾಲಯ ಆದೇಶಿಸಿದೆ. ತುಂಗ ಆಯಿಲ್ ಮಿಲ್ ಜಾಗದಲ್ಲಿ ಪಾಲಿಕೆ ಸಿಟಿ ಬಸ್ ನಿಲ್ದಾಣ ನಿರ್ಮಿಸಿ ಎಂದರು.
ಮಳೆ ಅನಾಹುತ ಎನಿಸದಿದ್ದರೂ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ ಅಧಿಕಾರಿಗಳು ಚರಂಡಿಯನ್ನ ಸ್ವಚ್ಛಗೊಳಿಸಿ ಮಳೆ ನೀರು ಚರಂಡಿಯಲ್ಲೇ ಹರಿಯುವಂತೆ ಮಾಡಲು ಕೋರಿದರು. ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಮಲೆನಾಡಿನಲ್ಲಿ ಹೆಚ್ಚಾಗಿದೆ. ಕಾಡುಕೋಣ, ಆನೆ, ಮಂಗಗಳ ಹಾವಳಿ ಹೆಚ್ಚಾಗಿದೆ. ಸರ್ಕಾರ ಮಂಕಿ ಪಾರ್ಕ್ ನಿರ್ಮಿಸುವುದಾಗಿ ಹೇಳಿ ಕೈಬಿಟ್ಟಿವೆ. ಕಾಡಿನಲ್ಲಿ ಆಹಾರದ ಕೊರತೆ ಹೆಚ್ಚಾಗಿ ಕಾಡು ಪ್ರಾಣಿಗಳು ನಗರಕ್ಕೆ ಬರುತ್ತಿದೆ. ಸರ್ಕಾರ ಇದನ್ನ ನಿಯಂತ್ರಿಸುವಂತೆ ಕೋರಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ ಪ್ರಸನ್ನ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಬಡವರಿಗೆ ಅನುಕೂಲವಾಗುವಂತೆ ಕ್ಯಾನ್ಸರ್ ಗಾಗಿ ಕೀಮೋ ಇಂಜೆಕ್ಷನ್ ಕೊಡುವ ಆಸ್ಪತ್ರೆ ಆರಂಭಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆ ಪಟ್ಟಿಯಲ್ಲಿ ಇಲ್ಲ. ಖಾಸಗಿಗೆ ಕರೆದುಕೊಂಡು ಹೋಗಿಬರಲು ರೋಗಿಯ ಕುಟುಂಬ ಹೈರಾಣ್ ಆಗಿದೆ. ಆದರೆ ಸಿಎಂ ಕೆಂಗಣ್ಣಿಗೆ ಗುರಿಯಾಗಿದೆಯಾ ಎಂದು ಪ್ರಶ್ನಿಸಿದರು.
ರಾಜಕೀಯ ಸಿಟ್ಟಿದ್ದರೂ ಹೊಟ್ಟೆಗೆ ಹಾಕಿಕೊಂಡು ಅರ್ಧಂಬರ್ಧ ನಿಂತಿರುವ ಕಾಮಗಾರಿಯನ್ನ ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. 18 ಜನ ಶಾಸಕರ ಅಮಾನತ್ತನ್ನ ತೆರವುಗೊಳಿಸಿರುವುದು ಸಭಾಧ್ಯಕ್ಷರ ಒಳ್ಳೆಯ ನಡೆಯಾದರೂ, ಗೌವರ್ನರ್ ಅವರು ಕರೆಯಿಸಿ ಹಿಂಪಡೆಯುವಂತೆ ಮಾಡಲಾಗಿದೆ ಎಂದು ತಿಳಿಸಿದರು.
6 ತಿಂಗಳು ಅಮಾನತ್ತಿನಲ್ಲಿಟ್ಟರೆ ಅದು ಅಭಿವೃಧಧಿಗೆ ಒಳ್ಳೆಯದಲ್ಲ. ವಾಪಾಸ್ ಪಡೆದಿರುವುದು ಸ್ವಾಗತಾರ್ಹವಾಗೊಇದೆ. 20 ರಾಜಕಾಲುವೆಯ ಸ್ವಚ್ಛಗೊಳಿಸಬೇಕು. ಇದು ಬ್ಲಾಕ್ ಆದರೆ 43 ವಾರ್ಡ್ ಮಳೆಗೆ ಮುಳುಗುತ್ತದೆ. ಶೀಘ್ರವಾಗಿ ಯುದ್ದೋಪಾದಿಯಲ್ಲಿ ಕೆಲಸ ಆಗಬೇಕೆಂದರು.
congratulates HDK and PM Modi