SUDDILIVE || SHIVAMOGGA
ದೇಶದ್ರೋಹಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಿ ಇಲ್ಲ ನಾವು ಕ್ರಮ ಕೈಗೊಳ್ಳುತ್ತೇವೆ-ಶಾಸಕ ಚೆನ್ನಬಸಪ್ಪ-You take action against traitors, otherwise, we will take action - MLA Chennabasappa
ಶಿವಮೊಗ್ಗದಲ್ಲಿ ಪಾಕ್ ಪರ ಇರುವ ವಿರೋಧಿಗಳನ್ನ ಬಂಧಿಸುವಂತೆ ಬಿಜೆಪಿ ನಗರ ಸಮಿತಿ ಇಂದು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದೆ.
ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದಲ್ಲಿ ಇಬ್ಬು ಯಾನೆ ಇಬ್ರಾಹಿಂ ಖಾನ್ ಮತ್ತು ತುಂಗ ನಗರ ಪೊಲೀಸ್ ಠಾಣೆಯಲ್ಲಿ ಭಾರತದ ವಿರೋದಿ ಕೆಲಸ ಮಾಡುತ್ತಿರುವವರು ಹೆಚ್ಚಿದ್ದಾರೆ. ವಿರೋಧಿಗಳನ್ನ ಬಂಧಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಶಾಸಕ ಚೆನ್ನಬಸಪ್ಪ, ಶಿವಮೊಗ್ಗ ದೇಶದ್ರೋಹಿಗಳಿಗೆ ಅಡಗುತಾಣ ವಿದ್ದಂತೆ ಕಂಡು ಬಂದಿದೆ. ಅವರನ್ನ ಬಂಧಿಸುವಂತಹ ಕೆಲಸ ಆಗಬೇಕು. ಶಿವಮೊಗ್ಗದಲ್ಲಿ ಕೋಟೆ ಮತ್ತು ತುಂಗ ನಗರ ಪೊಲೀಸ್ ಠಾಣೆಯಲ್ಲಿ ಪಾಕ್ ಪರದ ವಿಡಿಯೋ ತುಣುಕುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಇವರ ಹಿನ್ನಲೆ ಗಮನಿಸಿ ಬಂಧಿಸಬೇಕು. ಕುಟುಂಬದವರ ವಿರುದ್ಧವೂ ಕ್ರಮ ಜರುಗಿಸಬೇಕು. ಇಲ್ಲನಾವು ಕ್ರಮ ಕೈಗೊಳ್ಳುವುದಾಗಿ ಪೊಲೀಸರಿಗೆ ಎಚ್ಚರಿಸಿದರು. ನಾಳೆ ಬೆಳಿಗ್ಗೆ 10 ಗಂಟೆಯ ಒಳಗೆ ಪೊಲೀಸರು ಕ್ರಮ ಕೈಗೊಳದಿದ್ದರೆ ನಾಳೆ ಮತ್ತೆ ಠಾಣೆಗೆ ಬಿಜೆಪಿ ಬಂದು ಪರಿಶೀಲಿಸಲಿದೆ ಎಂದರು.
we will take action