ಶ್ರೀಗಂಧದ ತುಂಡುಗಳ ಸಹಿತ ಯುವಕ ಅರೆಸ್ಟ್‌, ಮತ್ತೊಬ್ಬ ಎಸ್ಕೇಪ್‌-Youth arrested with sandalwood pieces

SUDDILIVE || SHIVAMOGGA

ಶ್ರೀಗಂಧದ ತುಂಡುಗಳ ಸಹಿತ ಯುವಕ ಅರೆಸ್ಟ್‌, ಮತ್ತೊಬ್ಬ ಎಸ್ಕೇಪ್‌-Youth arrested with sandalwood pieces, another escapes

Sandalwood, arrested

ಅರಣ್ಯ ಸಂಚಾರಿ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಶ್ರೀಗಂಧ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದು ಆತನಿಗಾಗಿ ಶೋಧ ಕಾರ್ಯ ನಡೆಯತ್ತಿದೆ. 

ಕಾರ್ಯಾಚರಣೆಯಲ್ಲಿ 39 ಕೆ.ಜಿ 300 ಗ್ರಾಂ ತೂಕದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಹೊಸನಗರ ತಾಲೂಕು ಹೊಸಳ್ಳಿ ಗ್ರಾಮದ ನೆಲ್ಲಿಸರದ ವಾಸಿ ದಯಾಕುಮಾರ್‌ ಅಲಿಯಾಸ್‌ ದಯಾನಂದನನ್ನ ಬಂಧಿಸಲಾಗಿದೆ. ಕಾರಕ್ಕಿ ಗ್ರಾಮದ ಕೌಶಿಕ್‌ ನಾಪತ್ತೆಯಾಗಿದ್ದಾನೆ ಎಂದು ತಿಳಿಸಲಾಗಿದೆ. ಅರಣ್ಯ ಸಂಚಾರಿದಳದ ಪಿಎಸ್‌ಐ ವಿನಾಯಕ.ಕೆ, ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್‌ ಕುಮಾರ್‌, ಮಂಜುನಾಥ್‌, ಉಪ ವಲಯ ಅರಣ್ಯಾಧಿಕಾರಿ ಭರತ್‌ ಕುಮಾರ್‌, ಗಸ್ತು ಅರಣ್ಯ ಪಾಲಕ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

Youth arrested with sandalwood pieces

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close