SUDDILIVE || SHIVAMOGGA
ಹಾಲಿನ ದರ ಏರಿಕೆಗೆ ಬೀದಿಗಿಳಿಯುವ ಬಿಜೆಪಿ ರಸಗೊಬ್ಬರ ದರ ಏರಿಕೆಗೆ ಮೌನವೇಕೆ-ಬೇಳೂರು-Why is the BJP silent on the increase in fertilizer prices, which is taking to the streets over the milk price hike - Belur
ರಸಗೊಬ್ಬರ ಹೆಚ್ಚಳದ ಬಗ್ಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗಿದ್ದಾರೆ. 160-180 ರಸಗೊಬ್ಬರ ಚೀಲಕ್ಕೆ ಹೆಚ್ಚಳವಾಗಿದೆ. ಹಾಲಿನ ದರ ಹೆಚ್ಚಿಸಿದ ವೇಳೆ ರಸ್ತೆಗಿಳಿದಿದ್ದ ಬಿಜೆಪಿ ಈ ರಸಗೊಬ್ಬರದ ಹೆಚ್ಚಳಕೆ ಬಗ್ಗೆ ಮೌನವೇಕೆ ಎಂದು ಪ್ರಶ್ನಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೈತರು ಭತ್ತ ಬೆಳೆಯೋದೆ ಕಷ್ಟವಿದೆ. ರೈತರ ಪರ ಎನ್ನುವ ಪ್ರಧಾನಿ ಮೋದಿಯವರು ರೈತರ ಪರವಾದನಾ? ಎಂದು ಪ್ರಶ್ನಿಸಿದ ಗೋಪಾಲ ಕೃಷ್ಣ ಬಿಜೆಪಿ ಶಾಸಕರೋರ್ವರು ರಾಷ್ಟ್ರಧ್ವಜವನ್ನ ಕೇಸರಿಕರಣ ಮಾಡಲು ಹೊರಟಿರುವ ಬಿಜೆಪಿಯ ಉದ್ದೇಶವೇನು? ರಾಷ್ಟ್ರದ್ರೋಹಿಗಳು ಇವರುಗಳಾಗಿದ್ದು ಇವರನ್ನ ನೇಣುಗಂಬಕ್ಕೆ ಏರಿಸಬೇಕು ಎಂದರು.
ಸಂವಿಧಾನದ ಬಗ್ಗೆ ಮಾತನಾಡಿ ಕೆಲವರು ಕಳೆದುಹೋದರು. ಈಗ ರಾಷ್ಡ್ರಧ್ವಜದ ಬಗ್ಗೆ ಮಾತನಾಡುತ್ತಿದ್ದಾರೆ. ವಿಶ್ಗುರು ಎನ್ನುವ ಮೋದಿ ಈ ಬಗ್ಗೆನೂ ಸೈಲೆಂಟಾಗಿದ್ದಾರೆ. ಇಸ್ರೇಲ್ ಮತ್ತು ಇರಾನ್ ಯುದ್ಧದ ಬಗ್ಗೆನೂ ಮೌನವಾಗಿದ್ದಾರೆ. ದೇಶದ ಜನ ಪಾಕ್ ನ್ನ ಉಡೀಸ್ ಮಾಡುವ ಸಂದರ್ಭದಲ್ಲೂ ಯುದ್ದ ವಿರಾಮ ಘೋಷಿಸಲಾಯಿತು. ಯುದ್ದ ವಿರಾಮ ಘೋಷಣೆಯ ವೇಳೆಯೂ ಪ್ರಧಾನಿ ಮೋದಿ ಮತ್ತು ಅಮೇರಿಕಾದ ಟ್ರಂಫ್ ನಡುವೆ ಪೈಪೋಟಿಯಾಗಿದೆ ಎಂದು ವ್ಯಗ್ಯವಾಡಿದರು.
ವಸತಿ ಯೋಜನೆಯಲ್ಲಿ ಕಮಿಷನ್ ಆರೋಪದ ಬಗ್ಗೆ ತನಿಖೆಯಾಗಬೇಕು. ಮಂತ್ರಿ ತಪ್ಪಿತಸ್ಥರಾಗಿದ್ದರೆ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದರು.
Why is the BJP silent on the increase in fertilizer prices