SUDDILIVE || ANAVATTI
ಆನವಟ್ಟಿ | ರೈತ ಆತ್ಮಹತ್ಯೆ-Anavatti | Farmer suicide
ಆನವಟ್ಟಿ ಸಮೀಪದ ಹಿರೇಮಾಗಡಿ ಗ್ರಾಮದ ಯುವ ರೈತ ವೀರಭದ್ರಯ್ಯ ಪಾಟೀಲ್ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಸಾಲಭಾದೆ ತಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ
ವೀರಭದ್ರಯ್ಯ ಅವರು ಸಾಲ ಮಾಡಿಕೊಂಡು ತಮ್ಮ 5 ಎಕರೆ ಹೊಲದಲ್ಲಿ ಮೆಕ್ಕೆಜೋಳ ಬೆಳೆದಿದ್ದರು ಕಟಾವು ಮಾಡಿದ ಬಳಿಕ ಹಿರೇಮಾಗಡಿ ಕ್ರಾಸ್ ಹೆದ್ದಾರಿ ರಸ್ತೆಯಲ್ಲಿ ಒಣಗಿಸಲು ಹಾಕಿದ್ದರು ವಾರದಿಂದ ಸುರಿದ ಮಳೆಯಿಂದಾಗಿ ಜೋಳವು ಒಣಗದೆ, ಮೊಳಕೆಯೊಡೆದಿತ್ತು.
ಇದರಿಂದಾಗಿ ಸಾಲ ತೀರಿಸುವುದು ಸಾಧ್ಯವಿಲ್ಲವೆಂದು ಭಾವಿಸಿದ ವೀರಭದ್ರಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಧ್ಯಮ ಒಂದು ವರದಿ ಮಾಡಿದೆ ಪ್ರಕರಣ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ
Anavatti | Farmer suicide