SUDDILIVE || SHIVAMOGGA
ಜೈಲಿನಲ್ಲಿ ಹೊಡೆದಾಟ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!Another twist to the prison fight case!
ಜೂನ್ 14ರಂದು ಊಟಕ್ಕೆ ಬಿಟ್ಟ ಸಮಯದಲ್ಲಿ ನ್ಯಾಯಾಂಗ ಬಂಧನ ಕೊಡಗಾಗಿ ಜೈಲು ಸೇರಿದ್ದ ಕಿರಣ್ ನ ಮೇಲೆ ಹಲ್ಲೆಯಾದ ಪ್ರಕರಣ ಒಂದು ಮೊಬೈಲ್ ನಲ್ಲಿ ಸೆರೆಯಾಗಿ ಭದ್ರಾವತಿ ತಾಲೂಕಿನಾದ್ಯಂತ ಸಂಚಲನ ಮೂಡಿಸಿತ್ತು.
ಈ ಪ್ರಕರಣ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದ್ದು ಹಳೆಯ ಸುದ್ದಿ ಆದರೆ ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ ಜೈಲಿನಲ್ಲಿ ಹಲ್ಲೆಗೊಳಗಾದ ಕಿರಣ್ ನ ಕುಟುಂಬ ನಿನ್ನೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೊತೆ ಎಸ್ಪಿ ಮಿಥುನ್ ಕುಮಾರ್ ಗೆ ಮೊಬೈಲ್ ನಲ್ಲಿ ದೂರಿನ ಬಗ್ಗೆ ವಿವರಿಸಿದ್ದಾರೆ. ತನ್ನ ಮಗನ ಮೇಲೆ ಹಲ್ಲೆ ಮಾಡಿದ ನಾಲ್ಕು ಜನ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಪರಶುರಾಮ್ ಯಾನೆ ಚಿಂಗಾರಿ ಪ್ರದೀಪ್ ಶಬರೀಶ್ ಅಪ್ಪು ಹನುಮಂತ ಇವರು ಜೈಲಿನಲ್ಲಿ ಕಿರಣ್ ಎಂಬಾತನನ್ನು ಕುಮದ್ವತಿ ಕೊಠಡಿಯ ಸಂಖ್ಯೆ 32 ಕ್ಕೆ ಕರೆದುಕೊಂಡು ಹೋಗಿ ಥಳಿಸಿದ್ಧ ಘಟನೆಗೆ ಕುರಿತಂತೆ ಹಾಗೂ ಕಿರಣ್ ಮೇಲೆ ಹಲ್ಲೇ ನಡೆಸಿದ ಪ್ರಕರಣವನ್ನು ಮೊಬೈಲ್ ನಲ್ಲಿ ಸೆರೆ ಮಾಡಲಾಗಿದ್ದು, ಮೊಬೈಲ್ ನ್ನ ಇವ್ರಿಗೆ ತಲುಪಿಸಿದವರ ಯಾರು ಎಂಬುದರ ಕುರಿತಂತೆ ಕೂಲಂಕುಶವಾಗಿ ತನಿಖೆ ನಡೆಸುವಂತೆ ಜೈಲಿನ ಅಧೀಕ್ಷಕರಾದ ರಂಗನಾಥ್ ದೂರು ದಾಖಲಿಸಿದ್ದಾರೆ.
ಘಟನೆ ಕುರಿತಂತೆ ಹಲ್ಲೆಗೊಳಗಾದ ಕಿರಣ್ ತಾಯಿ ಮೀನಾಕ್ಷಿ ಅವರು, ಕೊಲೆ ಮಾಡುವ ಉದ್ದೇಶದಿಂದ ಮಗನ ಮೇಲೆ ಈ ಐವರು ಅಲ್ಲೇ ನಡೆಸಿದ್ದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ. ಆರೋಪಿ ಕಿರಣ್ ಗೆ ಜೂನ್ 25 ರವರೆಗೆ ನ್ಯಾಯಾಂಗ ಬಂಧನ ಒಳಪಡಿಸುವಂತೆ ನ್ಯಾಯಾಲಯ ಆದೇಶಿಸಿತ್ತು.