SUDDILIVE || SHIVAMOGGA
ಪೊಲೀಸರ ತಲೆದಂಡವನ್ನು ಖಂಡಿಸಿ ಬಿಜೆಪಿ ನಗರ ಘಟಕ ಪ್ರತಿಭಟನೆ-BJP city unit protests against police lathicharge
ಮೋದಿ ಕಾರ್ಯಕ್ರಮದಲ್ಲಿ ಲಕ್ಷ ಲಕ್ಷ ಜನ ಸೇರಿದ ಏನು ಅನಾಹುತ ಸಂಭವಿಸುವುದಿಲ್ಲ ನಿಮ್ಮ ಕಾರ್ಯಕ್ರಮದಲ್ಲಿ ಅನಾಹುತ ಸಂಭವಿಸುತ್ತದೆ ಎಂದು ಬಿಜೆಪಿಯ ಮುಖಂಡ ದೀನ್ ದಯಾಳ್ ಆರೋಪಿಸಿದರು.
ನಗರದ ಗೋಪಿ ವೃತ್ತದಲ್ಲಿ ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಪೊಲೀಸ್ ಅಧಿಕಾರಿಗಳ ತಲೆದಂಡವನ್ನು ಖಂಡಿಸಿ ನಗರ ಬಿಜೆಪಿ ಪ್ರತಿಭಟನೆ ನಡೆಯಿತು
ಮಂಗಳೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದು ಸಂಘಟನೆಗಳ ಮುಖಂಡರ ವಿರುದ್ಧ ಪೊಲೀಸ ಅಧಿಕಾರಿಗಳ ಮೂಲಕ ಗಡಿಪಾರು ಮಾಡುವುದು, ರಾತ್ರಿ ಕರೆ ಮಾಡಿಸುವುದು, ಸರ್ಕಾರ ಬೆಂಗಳೂರಿನ ಕಾಲು ತುಳಿದ ಪ್ರಕರಣದಲ್ಲಿ ಮೃತಪಟ್ಟವರ ಬಗ್ಗೆ ಜವಾಬ್ದಾರಿ ಇದೆಯಾ ಎಂದು ಪ್ರಶ್ನಿಸಿದ ದೀನ ದಯಾಳ್ ಮುಖ್ಯಮಂತ್ರಿಗಳ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಹುಬ್ಬಳ್ಳಿ ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸುವ ದಾಳಿಕೋರರನ್ನು ಪ್ರಕರಣದಿಂದ ಕೈ ಬಿಡುವ ನಿರ್ಧಾರ ತೆಗೆದುಕೊಳ್ಳುವ ಸರ್ಕಾರದ ನಿರ್ಣಯವನ್ನು ಸಹ ಇದೇ ವೇಳೆ ಖಂಡಿಸಿದ ದೀನ್ ದಯಾಳ್ ಇಂತಹ ಕೆಟ್ಟ ವ್ಯವಸ್ಥೆಯನ್ನು ಮೈಗೂಡಿಸಿಕೊಂಡು ಕಾಂಗ್ರೆಸ್ ಆಡಳಿತ ನಡೆಸುತ್ತಿದೆ ಈಗ ಕಾಲ್ತುಳಿತವನ್ನು ಪೊಲೀಸ್ ಅಧಿಕಾರಿಗಳ ತಲೆಗೆ ಕಟ್ಟಿ ನುಣಚಿಕೊಳ್ಳುತ್ತಿದೆ ಎಂದು ದೂರಿದರು.
BJP city unit protests