ರಾಜ್ಯ ಸರ್ಕಾರ ನಿರ್ಲಕ್ಷ ಖಂಡಿಸಿ ಜೂ.13 ಮತ್ತು 16 ರಂದು ಬಿಜೆಪಿಯಿಂದ ಪ್ರತಿಭಟನೆ- BJP to protest on June 13 and 16

 SUDDILIVE || SHIVAMOGGA

ರಾಜ್ಯ ಸರ್ಕಾರ ನಿರ್ಲಕ್ಷ ಖಂಡಿಸಿ ಜೂ.13 ಮತ್ತು 16 ರಂದು ಬಿಜೆಪಿಯಿಂದ ಪ್ರತಿಭಟನೆ -BJP to protest on June 13 and 16, condemning state government's negligence

Bjp, protest

ಜೂ.4 ರಂದು ರಾಜ್ಯದ ಇತಿಹಾಸದಲ್ಲಿ ಕರಾಳ ದಿನವೆಂದು ದಾಖಲಾಗಿದೆ. ಬೆಂಗಳೂರಿನಲ್ಲಿ ಆರ್ ಸಿಬಿ ವಿಜಯೋತ್ಸದ ವೇಳೆ 11 ಜನ ಕಾಲ್ತುಳಿತದಿಂದ ಸಾವನ್ನಾಗಿರುವುದು ಕಾಂಗ್ರೆಸ್ ದಿಗ್ಗಜರ ನಡುವಿನ ಪೈಪೋಟಿಯಿಂದ ನಡೆದಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜೇಂದ್ರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರ್ ಸಿ ಬಿ ವಿಜಯೋತ್ಸವವನ್ನ ಪುಕ್ಕಟೆ ಪ್ರಚಾರದಿಂದ ತಮ್ಮ ಹಿರಿಮೆಯನ್ನ ಹೆಚ್ಚಿಸಿಕೊಳ್ಳಲು ಮುಂದಾದ ಕಾಂಗ್ರಸ್ ನ ಡಿಸಿಎಂ ಮತ್ತು ಸಿಎಂ ನಡುವಿನ ಪೈಪೋಟಿ ಇದ್ದ ಕಾರಣ ಡಿಸಿಎಂ ತನ್ನ ಅಧಿಕಾರ ಬಳಸಿಕೊಂಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಂದು ವಿಜಯೋತ್ಸವ ನಡೆದಿದೆ ಎಂದು ದೂರಿದರು. 

ಏರ್ ಪೋರ್ಟ್ ಗೆ ಖುದ್ದು ಡಿಸಿಎಂ ಭೇಟಿ ನೀಡಿ ತಾವೇ ತಂಡವನ್ನ ಕರೆದುಕೊಂಡು ಬಂದಿದ್ದನ್ನ ದೃಶ್ಯ ಮಾಧ್ಯಮದಲ್ಲಿ ನೋಡಿದ್ದೇವೆ. ಒಂದು ವೇಳೆ ಬಿಟ್ಟಿದ್ದರೆ ಡಿಸಿಎಂ ಅವರೆ ಕಪ್ ಕಿತ್ತುಕೊಂಡು ಪ್ರದರ್ಶಿಸುವ ಉನ್ಮಾದಲ್ಲಿದ್ದರು. ಸಿಎಂ ವಿಜಯೋತ್ಸವದ ಬಗ್ಗೆ ಟ್ವೀಟ್ ಮಾಡಿ ಜನರಿಗೆ ಆಹ್ವಾನಿಸಿದ್ದಾರೆ. ಇದಾದ ನಂತರ ಆರ್ ಸಿಬಿ ಮತ್ತು ಕೆಎಸ್ ಸಿಎ ಟ್ವೀಟ್ ಮಾಡಿದೆ. ಕೆಎಸ್ ಸಿಎ ಡಿಎನ್ ಎ ಆರ್ ಸಿಬಿಯವರು ಹತ್ತಿರದ ಪೊಲೀಸ್ ಠಾಣೆಗೆ ವಿಜಯಞೊತ್ಸವದ ಕುರಿತು ಮನವಿ ನೀಡಿದ್ದು ಈ ಮನವಿಯನ್ನ ಪೊಲೀಸರು ತಿರಸ್ಕರಿಸಿದ್ದಾರೆ.

ವಿಧಾನ ಸಭೆಯ ಭವ್ಯ ಮೆಟ್ಟಿಲಿನ ಮೇಲೆ ವಿಜಯೋತ್ಸವ ನಡೆಸುವ ಬಗ್ಗೆ ನಂತರ ಸಭೆ ನಡೆಸಿದೆ. ಪೊಲೀಸರು ಲಕ್ಷಾಂತರ ಜನ ವಿಧಾನ ಸಭೆ ಜಮಾಯಿಸುವುದರಿಂದ ತರಾತುರಿಯಲ್ಲಿ ಬಂದೋ ಬಸ್ತ್ ನಡೆಸಲು ಸಾಧ್ಯವಿಲ್ಲ ಎಂದು ಇಲಾಖೆ ಹೇಳಿದೆ. ಆದರೆ ಸಿಎಂ ಇಷ್ಟೊಂದು ಜನ ಬರುತ್ತಾರೆ ಎಂದು ತಿಳಿದಿರಲಿಲ್ಲ ಎಂದು ಹೇಳುತ್ತಾರೆ. ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಸೂಚನೆಯನ್ನ ಪರಿಗಣಿಸಿಲ್ಲ. ಪ್ರಚಾರದ ಹಪಾಪಿಗೆ ಬಿದ್ದ ರಾಜ್ಯ ಸರ್ಕಾರ ಅನುಮತಿ ನೀಡಿದೆ. 

ಪೊಲೀಸ್ ಇಲಾಖೆ ಅನುಮತಿ ನೀಡದಿದ್ದರೂ ಸಹ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ನಡೆಸಲು ಡಿಸಿಎಂ ಅನುಮತಿ ಮತ್ತು ವಿಧಾನ ಸಭೆಯ ಎದುರು ಸಿಎಂ ಅವರ ಭರವಸೆಯಿಂದ ನಡೆದಿದೆ. ಸಿಎಂ ವಿಧಾನ ಸಭೆಯ ಮುಂದೆ ಯಾವ ಅವಘಡ ನಡೆದಿಲ್ಲ ಎಂದಿರುವುದು ಡಿಸಿಎಂ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಘಡ ನಡೆದಿದೆ ಎಂದು ಬೊಟ್ಟು ಮಾಡಿ ತೋರುತ್ತಿದ್ದಾರೆ ಎಂದು ಆರೋಪಿಸಿದರು. 

ಇಬ್ಬರ ನಡುವಿನ ಪೈಪೋಟಿಯಿಂದ ರಾಜ್ಯ ಸರ್ಕಾರದ ಕೆಟ್ಟ ನಡವಳಿಕೆಯಿಂದ ಕೊಲೆ ನಡೆದಿದೆ. ಇದು ಆಕಸ್ಮಿಕವಾಗಿಯಾಗಲಿ, ಅಚಾತುರ್ಯದಿಂದ ಆಗಲಿ ನಡೆದ ಅವಘಡ ಅಲ್ಲ. ಇದು ಕೊಲೆ ಎಂದರು.  ಕಾಲ್ತುಳಿತಕ್ಕೆ ಮೊಮ್ಮಗ ಸಾವಾಗಿದೆ ಎಂದು ತುಮಕೂರಿನ ಅಜ್ಜಿ ಸಾವನ್ನಪ್ಪಿದ್ದಾಳೆ. ಇದಕ್ಕೆ ಯಾರು ಜವಬ್ದಾರಿ. ಕಾಲ್ತುಳಿತಕ್ಕೆ ಅಭಿಮಾನಿಗಳ ಬಲಿಯಾದರೆ 'ಕೈ' ತುಳಿತಕ್ಕೆ ಪೊಲೀಸರು ಬಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ ಎಂದು ಆರೋಪಿಸಿದರು. 

ತಮ್ಮ ಹುಳಕನ್ನ ಮುಚ್ಚಿಹಾಕಲು ಪೊಲೀಸರನ್ನ ಹರಕೆಯ ಕುರಿ ಮಾಡಲಾಗಿದೆ. ನ್ಯಾಯಾಲಯ ಚಾಟಿ ಬೀಸಿದ ನಂತರ ಕಾಂಗ್ರೆಸ್ ನಾಯಕರು ಈ ಕ್ರಮ ಜರುಗಿಸಿದ್ದಾರೆ. ಸಿಎಂ ಮತ್ತುಡಿಸಿಎಂ ಅವರ ಮೂರ್ಖತನದಿಂದ ನಡೆದ ಘಟನೆಯ ಬಗ್ಗೆ ಚೂರು ಅನುಕಂಪದ ಮಾತನಾಡದ ಸಿಎಂ ವಿಧಾನ ಸಭೆ ಎದುರು ನಡೆದ ಕಾರ್ಯಕ್ರಮದಲ್ಲಿ ಅವಘಡ ನಡೆದಿಲ್ಲವೆಂದು ಕ್ಲೈಮ್ ಮಾಡಿಕೊಂಡಿದ್ದಾರೆ. ತಮ್ಮ ಹಠಕ್ಕೆ ಚಟಕ್ಕೆ ಸಾವಾಗಿದೆ. ನೀವೇ ನೇರ ಜವಬ್ದಾರಿ ಎಂದಿದ್ದಾರೆ. 

ಸಾವಿನ ಬ್ರೇಕಿಂಗ್ ನ್ಯೂಸ್ ಆರಂಭವಾದಾಗಲೂ ಕೂಡ ಕಾರ್ಯಕ್ರಮವನ್ನ ರದ್ದುಪಡಿಸಬೇಕೆಂದು ಅನಿಸಲಿಲ್ಲ. ಇದಾದ ನಂತರ ಸಿಎಂ ಎಂಟಿಆರ್ ಹೋಟೆಲ್ ಗೆ ಹೋಗಿ ಮಸಾಲೆ ದೋಸೆ ತಿನ್ನುತ್ತಿದ್ದಾರೆ. ಕಾಲ್ತುಳಿದಿಂದ ಸಾವಾದರೂ ತಮಗೆ ಗೊತ್ತಿಲ್ಲ ಎಂಬಂತೆ ನಟಿಸಿದ್ದಾರೆ. ಸಿಎಂ ಚೆನಲ್ಲಾಟ ಆಟ ಆಡುತ್ತಿದ್ದಾರೆ ಎಂದು ಪ್ರಶ್ನಿಸಿದರು. 

ಜೂ.4 ರಂದು ನಡೆದ ಅವಘಡ ರಾಜ್ಯ ಸರ್ಕಾರದ ದುರ್ನಡತೆ ಮತ್ತು ದುರ್ಬಳಕೆಯಿಂದಾಗಿ ಎಂದ ವಿಜೇಂದ್ರ ಸಿಎಂಗೆ ಪತ್ರ ಬರೆದಿದ್ದೇನೆ. ರಾಜ್ಯದ ಜನರ ಭಾವನೆಯನ್ನ ತಿಳಿಸುವ ಪ್ರಯತ್ನ ಪತ್ರದ ಮೂಲಕ ತಿಳಿಸಲು ಪ್ರಯತ್ನಿಸಿದ್ದೇನೆ. ಪತ್ರ ನೋಡಿದ ತಕ್ಷಣ ಸಿಎಂ ಸ್ಪಂಧಿಸುತ್ತಾರೆ ಎಂಬ ನಂಬಿಜೆಯಿಲ್ಲ ರಾಜ್ಯ ಸರ್ಕಾರಕ್ಕೆ ದಪ್ಪ ಚರ್ಮವಿದೆ. ರಾಜ್ಯದ ಗೌರವವನ್ನ ಉಳಿಸಲು, ನಾಡಿನ ಜನರ ಭಾವನೆಗೆ ಸ್ಪಂದಿಸಯವ ಪ್ರಯತ್ನ ಮಾಡಿದ್ದೇನೆ. 

ಕಾಂಗ್ರೆಸ್ ಹೈಕಮಾಂಡ್ ಸಿಎಂ ಮತ್ತು ಡಿಸಿಎಂ ರನ್ನ ದೆಹಲಿಗೆ ಕರೆಸಿಕೊಂಡಿದೆ. ಆದರೆ ಇದೇ ಹೈಕಮಾಂಡ್ ಮೂಡ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಿಲ್ಲ. ಮಾನವೀಯತೆ ಇದೆ. ಜವಬ್ದಾರಿಯುತವಾಗಿ ತೆಗೆದುಕೊಳ್ಳಬೇಕು ಎಂಬ ಭಾವನೆಯಿದೆ ಎಂದು ಅನಿಸುವುದಿಲ್ಲ.‌ ಬಿಜೆಪಿ ಜವಬ್ದಾರಿ ಸ್ಥಾನದಲ್ಲಿದ್ದುಕೊಂಡು ನಿರ್ವಹಿಸಲಿದೆ. ದುಷ್ಟ, ಭ್ರಷ್ಠ ರಾಜ್ಯ ಸರ್ಕಾರ ಮುಂದುವರೆಯುವವರೆಗೆ ಜನರಿಗೆ ಒಳ್ಳಯದಾಗಲ್ಲ. ಕಾಂಗ್ರೆಸ್ ಸರ್ಕಾರದ ವಿರುಧಧ ಬೃಹತ್ ಹೋರಾಟ ನಡೆಸಲು ತೀರ್ಮಾನಿಲಾಗಿದ್ದು. ಜೂ.13 ರಂದು ಬೆಂಗಳೂರಿನ ಪ್ರೀಢಂ ಪಾರ್ಕ್ ನಲ್ಲಿ ಪ್ರತಿಭಟಿಸಲಾಗುತ್ತಿದೆ. 

ಸಿಎಂ ಡಿಸಿಎಂ ಅಧಿಕಾರದಿಂದ ಕೆಳಗಿಳಯುವರೆಗೂ ಪ್ರತಿಭಟಿಸಲಾಗುವುದು. ಸಿಎಂ ಮನೆ ಮುತ್ತಿಗೆ ಹಾಕಲಾಗುವುದು. ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಜೂ.16 ರಂದು ಎರಡನೇ ಹಂತದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. 

ಆರೋಪಿ ನಂಬರ್ ರಾಜ್ಯದ ಮುಖ್ಯಮಂತ್ರಿ, ಎರಡನೇ ಆರೋಪಿ ಡಿಸಿಎಂ ಆರೋಪಿ ಮರನೆಯವರು ಗೃಹಸಚಿವರಾಗಿದ್ದಾರೆ. ನಂತರ ಆರ್ ಸಿಬಿ, ಡಿಎನ್ ಎ ಮತದತು ಕೆಎಸ್ ಸಿಎ ಆರೋಪಿಗಳಾಗಿದ್ದಾರೆ. ಸಿಟಿಂಗ್ ಹೈಕೋರ್ಟ್ ಜಡ್ಜ್ ನಿಂದ ತನಿಖೆಯಾಗಬೇಕಿದೆ. ಸಿಸಿಬಿಯಿಂದಲ್ಲ ಎಂದು ವಿಜೇಂದ್ರ ಆರೋಪಿಸಿದರು.

ಸಿಎಂಗೆ ಮೋದಿ ಸರ್ಕಾರದ ವಿರುದ್ಧ ಮಾತನಾಡುವ ನೈತಿಕತೆಯಿಲ್ಲ. ಎರಡು ವರ್ಷದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಠಾಚಾರ, ಅತ್ಯಾಚಾರ ಮತ್ತು ಇತರೆ ವಿಷಯಗಳು ಹೆಚ್ಚಾಗಿವೆ. ಆರ್ ಸಿಬಿ ವಿಜಯೋತ್ಸವದ ಕಾಲ್ತಳಿತ ಘಟನೆ ಕಪ್ಪು ಚುಕ್ಕೆಯಾಗಿ ಸೇರಲಿದೆ. 

ಸುದ್ದಿಗೋಷ್ಠಿಯಲ್ಲಿ ಎಂಎಲ್ ಸಿಗಳಾದ  ಡಾ.ಧನಂಜಯ ಸರ್ಜಿ, ಡಿಎಸ್ ಅರುಣ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮುಖಂಡರಾದ ಮಾಲ್ತೇಶ್, ಗಣೇಶ್ ಬಿಳಕಿ, ಮೋಹನ್ ರೆಡ್ಡಿ ಎನ್ ಡಿ ಸತೀಶ್, ವಿನ್ಸೆಂಟ್ ರೋಡ್ರಿಗೋ ಮೊದಲಾದವರು ಉಪಸ್ಥಿತರಿದ್ದರು. 

BJP to protest on June 13 and 16

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close