SUDDILIVE || SHIVAMOGGA
ರಾಯಚೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ KSRTC ಬಸ್ ಪಲ್ಟಿ!KSRTC bus coming from Raichur to Shimoga overturns!
ಶಿವಮೊಗ್ಗದ ಹೊರವಲಯದಲ್ಲಿ KSRTC ಬಸ್ ಒಂದು ಪಲ್ಟಿ ಹೊಡೆದಿದೆ. ರಾಯಚೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಎನ್ ಈ ಕೆ ಅರ ಟಿ ಸಿ ಬಸ್ ಇಂದು ಬೆಳಗಿನ ಜಾವ ಸುಮಾರು ಐದೂವರೆ ಸಮಯದಲ್ಲಿ ಬೇಡರ ಹೊಸಳ್ಳಿ ಬಳಿ ಮಗಚಿಕೊಂಡು ಬಿದ್ದಿದೆ
ರಾಯಚೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ ನಲ್ಲಿ ಸುಮಾರು 29 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಇದರಲ್ಲಿ ಮೂವರಿಗೆ ಸ್ವಲ್ಪಮಟ್ಟಿನ ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸ್ಥಳದಲ್ಲಿ ಕೆಎಸ್ಆರ್ಟಿಸಿ ಡಿಟಿಓ ದಿನೇಶ್ ಕುಮಾರ್ ಭೇಟಿ ನೀಡಿದ್ದು ಗಾಯಾಳುಗಳನ್ನು ಖುದ್ದಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ
ಬೇಡರ ಹೊಸಹಳ್ಳಿ ಬಳಿ ಕೆಎಸ್ಆರ್ಟಿಸಿ ಬಸ್ ಬರುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ತಿರುವಿನ ಬಳಿ ಉರಳಿ ಬಿದ್ದಿದೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ಬಹುತೇಕರು ನಿದ್ದೆ ಮಂಪ್ರಿನಲ್ಲಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
KSRTC bus coming from Raichur to Shimoga overturns!