" alt="ad">

ಸಂಘಟನೆಯಲ್ಲಿ ಸಕ್ರಿಯರಾಗಿರಿ-ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕರೆ- Be active in the organization

 SUDDILIVE || SHIAMOGGA

ಸಂಘಟನೆಯಲ್ಲಿ ಸಕ್ರಿಯರಾಗಿರಿ-ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕರೆ-Be active in the organization - Youth Congress National General Secretary calls

Be, active


ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ನ ಕಾರ್ಯಕಾರಣಿ ಸಭೆ ನಡೆದಿದೆ. ಸಭೆಯನ್ನ ಯುವ ಕಾಂಗ್ರೆಸ್ ರಾಷ್ಟ್ರೀಯ ಯುವ ಕಾಂಗ್ರಸ್ ನ ರಾಜ್ಯಾ ಉಸ್ತುವಾರಿ ಹಾಗೂ ಪ್ರಧಾನ ಕಾರ್ಯದರ್ಶಿ  ನಿಗಮ್ ಭಂಡಾರಿ ಮಾತನಾಡಿ  ಸಂಘಟನೆಯನ್ನ ಶಕ್ತಿ ಹೆಚ್ಚಿಸಿ ದುರ್ಬಲತೆಯನ್ನ ಕಡಿಮೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸೋಣ ಎಂದು ಕರೆ ನೀಡಿದರು. 

ಕಳೆದ ವರ್ಷ ಯುವ ಕಾಂಗ್ರೆಸ್ ಗೆ ಚುನಾವಣೆ ನಡೆದಿದೆ. ಯುವ ಕಾಂಗ್ರೆಸ್ ನ ರಾಜ್ಯಧ್ಯಕ್ಷರ, ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ, ಖಜಾಂಚಿಗಳು ಆಯ್ಕೆಯಾಗಿದ್ದಾರೆ. ಸಾಮಾನ್ಯ ಕುಟುಂಬದಿಂದ ರಾಜಕಾರಣಕ್ಕೆ ಮತ್ತು ದೇಶ ಸೇವೆಗೆ  ಬರುವ ಯುವಕರಿಗೆ ರಾಹುಲ್ ಗಾಂಧಿ ಯುವ ಕಾಂಗ್ರೆಸ್ ಮೂಲಕ ಅವಕಾಶ ನೀಡಿದ್ದಾರೆ. 

ಪದಾಧಿಕಾರಿಗಳಾಗಲು ಬಯಸುವವರು ಚುನಾವಣೆ ಸೋತರೆ  ನಿರಾಶೆಯಾಗುತ್ತಿರುವುದು ಕಂಡು ಬರುತ್ತಿದೆ.  ಮಂಜುನಾಥ ಭಂಡಾರಿಯವರು ಹಾಗೆ ಯೋಚಿಸಿದ್ದರೆ ಇಂದು ಉನ್ನತ ಸ್ಥಾನಕ್ಕೆ ಏರುತ್ತಿರಲಿಲ್ಲ. ಸತತ ಪ್ರಯತ್ನ, ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಪರಿಣಾಮ ಇಂದು ಉನ್ನತ ಸ್ಥಾನಕ್ಕೆ ಏರಿದ್ದಾರೆ. ಯುವ ಕಾಂಗ್ರೆಸ್ ನ ಅಧ್ಯಕ್ಷ ಆಗಲಿಲ್ಲ ಎಂದು ಚುನಾವಣೆಯಿಂದ ಹಿಂದೆ ಸರಿದಿದ್ದರೆ ಅವರು ಸಂಘಟನೆ ಶಕ್ತಿ ಬೆಳೆಯುತ್ತಿರಲಿಲ್ಲ ಎಂದರು. 

ನೀವು ನಾಯಕರಾದರೆ ಎಂಎಲ್ ಎ ಮತ್ತು ಎಂಪಿಯಾಗಲು ಯಾರೂ ತಡೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನಮ್ಮಂತಹ ಕಾರ್ಯಕರ್ತರ ನೆರವಿನಿಂದ ಸರ್ಕಾರ ಬಂದಿದೆ. ಗ್ಯಾರೆಂಟಿ, ಯುವಕರ ಶಕ್ತಿಯಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಗ್ಯಾರೆಂಟಿ ಮತ್ತು ಸರ್ಕಾರದ ಯೋಜನೆಗಞಲನ್ನ ಮನೆ ಮನೆಗೆ ಕೊಂಡುಯ್ಯುವ ಕೆಲಸ ನಮ್ಮ‌ಮೇಲಿದೆ ಎಂದರು. 

ಬೇರೆ ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನ ಭೇಟಿಯಾಗಲು ಸಾಧ್ಯವಿಲ್ಲ ಆದರೆ ಕಾಂಗ್ರೆಸ್ ನ ರಾಷ್ಟ್ರೀಯ ಯುವ ಕಾಂಗ್ರೆಸ್ ನ ಅಧ್ಯಕ್ಷರು ನಿಮ್ಮ ರಾಜ್ಯದವರಾಗಿದ್ದಾರೆ. ಆಕ್ಸಿಜನ್ ಮ್ಯಾನ್ ಎಂದು ಇಂದು ಹೆಸರುವಾಸಿ ಯಾಗಿದ್ದಾರೆ. ತಾಳ್ಮೆ ಬಹಳ ಬೇಕಿದೆ. ತಾಳ್ಮೆ ಮತ್ತು ಆರೋಗ್ಯ ಇದ್ದವನು ಸಂಘಟನೆಯಲ್ಲಿ ಮುಂಚೂಣಿಗೆ ಬರಲಿದ್ದಾರೆ. ನಾಳೆಯಿಂದ ಜಿಲ್ಲಾ ಅಧ್ಯಕ್ಷರು ವಿಧಾನ ಸಭಾ ಕ್ಷೇತ್ರದ ಪ್ರವಾಸ ಮಾಡಲು ಸಲಹೆ ನೀಡಿದರು.

ಪ್ರವಾಸದಲ್ಲಿ ಪಂಚಾಯಿತಿ ಯಲ್ಲಿ ಒಬ್ಬನಿಗೆ ಜವಬ್ದಾರಿ ನೀಡಿ, ವಿಧಾನ ಸಭೆಯ ಕಾರ್ಯಕರ್ತರ 15 ದಿನ ಸಭೆ ನಡೆಸಿ, ಸರ್ಕಾರದ ಯೋಜನೆಗಳನ್ನ ಮನೆಗೆ ತಲುಪಿಸಲು ಪಂಚಾಯಿತಿ ಸದಸ್ಯರಿಗೆ ನೀಡಿದರೆ ಅವರ ಸಭೆ ನಡೆಸಬಹುದು ಎಂದು ಸಲಹೆ ನೀಡಿದರು. ಸ್ಥಳೀಯ ಚುನಾವಣೆ ಬರುತ್ತಿದೆ. ತಮ್ಮ ವಾರ್ಡ್ ಗಳ ಜವಬ್ದಾರಿ ಹೋರುವ ಕಾರ್ಯಕರ್ತರಿಗೆ ಗೆಲ್ಲುವ ಸಾಮರ್ಥ್ಯರನ್ನ ಗುರುತಿಸಿ ಅದರ ಆಧಾರದ ಮೇಲೆ ಪಕ್ಷ ಟಿಕೇಟು ನೀಡಿದರೆ ಒಳ್ಳೆಯದು ಎಂದರು.  

ಜನರ ಜೊತೆ ಬೆರೆಯಿರಿ ಕೇವಲ ಘೋಷಣೆ ಕೂಗಿದತೆನಾಯಕರಾಗಲ್ಲ. ಬೇರೆ ಚುನಾವಣೆಯಲ್ಲಿ ಗ್ರಾಪಂ ಚುನಾವಣೆ ಬರಲಿದೆ. ಈಗಲಿಂದಲೇ ಚಟುವಟಿಕೆಯಲ್ಲಿ ತೊಡಗಿರಿ. ಯುವಕಾಂಗ್ರೆಸ್ ನಿಂದ ಮುಖ್ಯ ಕಾಂಗ್ರೆಸ್ ಗಿಂತ ಶಕ್ತಿಶಾಲಿಯಾಗಿ ಬೆಳೆಯಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ ಸಲಹೆ ನೀಡಿದರು.

ಯುವ ಕಾಂಗ್ರೆಸ್ ನ ರಾಜ್ಯ ಅಧ್ಯಕ್ಷ ಮಂಜುನಾಥ್ ಹೆಚ್ ಎಸ್, ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ,  ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ ಭಂಡಾರಿ ,  ಎಂಎಲ್ ಸಿ ಬಲ್ಕಿಸ್ ಭಾನು, ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಶಿವಕುಮಾರ್, ಆದರ್ಶ ಹುಂಚದ ಕಟ್ಟೆ, ಎನ್ ರಮೇಶ್ ಮೊದಾದವರು ಉಪಸ್ಥಿತರಿದ್ದರು. 

Be active in the organization

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close