SUDDILIVE || BHADRAVATHI
ಕಾಗೇಹಳ್ಳ ಬ್ರಿಡ್ಜ್ ಬಳಿ ಗೋವಿನ ತ್ಯಾಜ್ಯ ಪತ್ತೆ-ಪೊಲೀಸರ ವಿರುದ್ಧ ಮುಗಿಬಿದ್ದ ಹಿಂದೂ ಸಂಘಟನೆಗಳು-Beef bone and skin found at Kage Halla
ಕಾಗೆ ಹಳ್ಳದಲ್ಲಿರುವ ಭದ್ರನದಿಯ ಸೇತುವೆ ಬಳಿ ಗೋವಿನ ಕಳೆಬರ ಪತ್ತೆಯಾಗಿದ್ದು ಗೋವಿನ ಕಳೆಬರ ಪತ್ತೆಯಾಗಲು ಪೊಲೀಸರ ನಿರ್ಲಕ್ಷವೇ ಕಾರಣವೆಂದು ಹಿಂದೂ ಸಂಘಟನೆಗಳು ಮುಗಿಬಿದ್ದಿವೆ. ರಾಜಕೀಯ ಒತ್ತಡಕ್ಕೆ ಗೋವುಗಳ ರಕ್ಷಣೆ ವಾಗಿಲ್ಲವೆಂದು ಸಂಘಟನೆ ಆರೋಪಿಸಿದೆ.
ರಾಜಕೀಯ ಒತ್ತಡಕ್ಕೆ ಮಣಿದು ಮಾಹಿತಿ ಇದ್ದರೂ ಸಮೇತ ಗೋ ಹತ್ಯೆಯಾಗಲು ಭದ್ರಾವತಿಯ ಪೊಲೀಸ ಅಧಿಕಾರಿಗಳು ಬಿಟ್ಟಿದ್ದಾರೆ. ಗೋವಿನ ಬಗ್ಗೆ ಮಾಹಿತಿಯನ್ನ ಭದ್ರಾವತಿ ಡಿವೈಎಸ್ಪಿ, ಶಿವಮೊಗ್ಗ ಜಿಲ್ಲೆಯ ಎಸ್ಪಿ, ಪೂರ್ವ ವಲಯದ ಐಜಿ ರವರಿಗೆ ವಾಟ್ಸಪ್ ನಲ್ಲಿ ಗೋ ರಕ್ಷಣೆ ಮಾಡಲು ಮಾಹಿತಿ ನೀಡಲಾಗಿತ್ತು. ಆದರೂ ಸಹ ಹತ್ಯೆ ನಡೆದಿದೆ. ಹತ್ಯೆಯಾದ ಗೋವುಗಳ ತ್ಯಾಜ್ಯವನ್ನ ನದಿಗೆ ಬಿಸಾಕಲಾಗಿದೆ ಎಂದು ಹಿಂದೂ ಸಂಘಟಕರು ಆರೋಪಿಸಿದ್ದಾರೆ.
ಬಿಳಿಯ ಬಣ್ಣದ ಗೋವನ್ನು ಹತ್ಯೆ ಮಾಡಲಾಗಿದೆ. ಈ ಗೋವುಗಳನ್ನ ಕಟ್ಟಿರುವುದು ರೈತರಲ್ಲ ಒಬ್ಬ ತೆಂಗಿನ ಕಾಯಿಯ ವ್ಯಾಪಾರಿ ಎಂದು ಮಾಹಿತಿ ನೀಡಲಾಗಿದೆ. ಆದರೂ ಸಹ ಪ್ರಕರಣವನ್ನ ದಾಖಲಿಸದೆ, ದಾಳಿಯೂ ನಡೆಸದೆ ನಿರ್ಲಕ್ಷಿಸಲಾಗಿದೆ.
ಇದು ರಾಜಕೀಯ ಒತ್ತಡದಿಂದ ಗೋ ಹತ್ಯೆ ಮಾಡಿರುವವರ ಮೇಲೆ ಭದ್ರಾವತಿಯಲ್ಲಿ ದೂರು ದಾಖಲಾಗುತ್ತಿಲ್ಲ. ಪ್ರತಿ ವರ್ಷ ಬಕ್ರೀದ್ ಹಬ್ಬದ ಮುಂಚೆ ಗೋವನ್ನು ರಕ್ಷಣೆ ಮಾಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೂ ಭದ್ರಾವತಿಯಲ್ಲಿ ಪ್ರತಿ ವರ್ಷ ಇದೇ ರೀತಿ ಗೋವುಗಳ ಹತ್ಯೆಯಾಗಿದೆ ಎಂದು ಸಂಘಟನೆಯ ದೇವರಾಜ್ ಅರಳಹಳ್ಳಿ ಆರೋಪಿಸಿದ್ದಾರೆ.
ನೂರಾರು ಗೋವುಗಳು ಹತ್ಯೆಯಾದರೂ ದೂರು ಇಲ್ಲ, ರಕ್ಷಣೆಯೂ ಇಲ್ಲ ಹಾಗೂ ಭದ್ರಾವತಿಯಲ್ಲಿ ಪ್ರತಿಯೊಂದು ಪ್ರಕರಣ ದಾಖಲಾಗಬೇಕಾದರೂ ಪೊಲೀಸರ ಮೇಲೆ ಒತ್ತಡ ಹೇರುತ್ತಿರುವ ಗೋ ಹಂತಕರ ಪರವಾಗಿರುವ ಭ್ರಷ್ಟ ರಾಜಕಾರಣಿಗಳು ನಿಲ್ಲುತ್ತಿರುವುದಾಗಿ ದೂರಿದ್ದಾರೆ. ಗೋವಿನ ಶಾಪ ನಿಮಗೆ ತಟ್ಟೆ ತಟ್ಟುತ್ತದೆ. ಕಾಗೇಹಳ್ಳದ ಬಳಿ ಏಳು ಗೋವಿನ ಕಳೆಬರಹ ಪತ್ತೆಯಾಗಿದ್ದು ಇದು ಪೊಲೀಸರ ನಿರ್ಲಕ್ಷವೆಂದು ಆರೋಪಿಸಿದ್ದಾರೆ.
Beef bone and skin found at Kage Halla