SUDDILIVE || THIRTHAHALLI
ಕೆರೆ ಹಾರಿದ ಕಾರು, ಪ್ರಾಣಾಪಾಯದಿಂದ ಚಾಲಕ ಪಾರು-Car plunges into lake, driver escapes fatality
ಶಿವಮೊಗ್ಗಕ್ಕೆ ತೆರಳುತ್ತಿದ್ದ ಟಾಟಾ ಹೇರಿಯರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬಾಳಗಾರು ಸಮೀಪದ ಕೆರೆಯೊಂದಕ್ಕೆ ಹಾರಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ರಾತ್ರಿ ಬಾಳಗಾರು ತಿರುವಿನಲ್ಲಿ ಎದುರಿನಿಂದ ಬಂದ ಸರ್ಕಾರಿ ಬಸ್ ನ್ನ ತಪ್ಪಿಸಲು ಪ್ರಯತ್ನಿಸಿದ ಕಾರು ಚಾಲಕ ತಿರುವಿನಲ್ಲಿದ್ದ ಬಾಳಗಾರು ಕೆರೆಗೆ ಹಾರಿಸಿದ್ದು ಈ ಅವಘಡ ಸಂಭವಿಸಿದೆ.
ಕೆರೆಯಲ್ಲಿ ಮುಳುಗಿದ್ದ ಕಾರಿನೊಂದಿಗಿದ್ದ ಚಾಲಕನನ್ನು ರಕ್ಷಿಸಲು ಸರ್ಕಾರಿ ಬಸ್ ನಲ್ಲಿದ್ದ ಪ್ರಯಾಣಿಕರು ಮುಂದಾಗಿ ಕಾರು ಚಾಲಕನನ್ನು ನೀರಿನಿಂದ ಹೊರ ತಂದಿದ್ದಾರೆನ್ನಲಾಗಿದೆ. ಚಾಲಕ ಪಾರಾಗಿದ್ದು ಕಾರನ್ನು ಬೆಳಗ್ಗೆ ಹೊರ ತೆಗೆಯಲಾಗಿದೆ.
ತೀರ್ಥಹಳ್ಳಿಯಿಂದ ಶಿವಮೊಗ್ಗ ಕ್ಕೆ ತೆರಳುವಾಗ ಈ ಘಟನೆ ನಡೆದಿದ್ದು ಚಾಲಕ ಶಿವಮೊಗ್ಗದ ನಿವಾಸಿ ಎಂದು ತಿಳಿದು ಬಂದಿದೆ.
Car plunges into lake